Advertisement

ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಗೆ ಸೂಚನೆ

01:37 PM Sep 16, 2018 | Team Udayavani |

ಪುಂಜಾಲಕಟ್ಟೆ : ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕಿನ ಸರಪಾಡಿ ಮತ್ತು ಇತರ 97 ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಸರಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೆಕ್ಕಿದಕಾಡುವಿನಲ್ಲಿ ಶನಿವಾರ ಗುದ್ದಲಿ ಪೂಜೆ ಕಾರ್ಯಕ್ರಮ ಜರಗಿತು. 

Advertisement

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ನಿಗದಿತ ಸಮಯದೊಳಗೆ ಉತ್ತಮ ಗುಣಮಟ್ಟದಿಂದ ಕಾಮಗಾರಿಯನ್ನು ನಡೆಸುವಂತೆ ಸೂಚಿಸಿದರು. ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ದಯಾನಂದ ಶೆಟ್ಟಿ ಮುನ್ನಲಾಯಿ, ಜಿ.ಪಂ. ಸದಸ್ಯ ಪದ್ಮಶೇಖರ ಜೈನ್‌, ತಾ.ಪಂ.ಸದಸ್ಯ ಸ್ವಪ್ನಾ ವಿಶ್ವನಾಥ, ಗ್ರಾ.ಪಂ. ಸದಸ್ಯರಾದ ಧನಂಜಯ ಶೆಟ್ಟಿ, ಪ್ರೇಮಾ, ವಿನ್ಸೆಂಟ್‌ ಪಿಂಟೋ, ಶಿವಪ್ಪ ಪೂಜಾರಿ ಆದಂ ಕುಂಞಿ, ಡೆನಿಸ್‌ ಮೊರಾಸ್‌, ಸರಪಾಡಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಶಶಿಕಾಂತ್‌ ಶೆಟ್ಟಿ ಆರುಮುಡಿ, ಸರಪಾಡಿ ದೇವಸ್ಥಾನ ಮೊಕ್ತೇಸರ ಗಿರಿಧರ ಎಸ್‌., ಪ್ರಮುಖರಾದ ಸಂದೀಪ್‌ ಕೋಟ್ಯಾನ್‌, ಶಾಂಭವಿ, ಗುತ್ತಿಗೆದಾರ ಸುಧಾಕರ ಶೆಟ್ಟಿ, ಪಂಚಾಯತ್‌ ರಾಜ್‌ ಬಂಟ್ವಾಳ ಉಪ ವಿಭಾಗದ ಸ. ಕಾರ್ಯ ನಿರ್ವಾಹಕ ಅಭಿಯಂತ ಜಿ. ನರೇಂದ್ರ ಬಾಬು, ಕಿರಿಯ ಅಭಿಯಂತ ಕೃಷ್ಣ, ಪಂ.ಅ. ಅಧಿಕಾರಿ ರಾಜಶೇಖರ ರೈ ಮತ್ತಿತರರಿದ್ದರು. 

ಶುದ್ಧನೀರು ಪೂರೈಕೆ
ಈ ಯೋಜನೆ 32.90 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ಈಗಾಗಲೇ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಇದರಿಂದ ಈ ಭಾಗದ ಮನೆಗಳಿಗೆ ಶುದ್ಧನೀರು ಪೂರೈಕೆಯಾಗಲಿದೆ.
– ಜಿ. ನರೇಂದ್ರ ಬಾಬು
ಅಭಿಯಂತರು

Advertisement

Udayavani is now on Telegram. Click here to join our channel and stay updated with the latest news.

Next