Advertisement

ಸಂಸತ್‌ ಮುತ್ತಿಗೆಗೆ ರೈತರ ನಿರ್ಧಾರ: ವ್ಯಾಪಕ ಬಂದೋಬಸ್ತ್

11:07 PM Jul 21, 2021 | Team Udayavani |

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ಹರ್ಯಾಣದ ರೈತರು, ಗುರುವಾರದಂದು ತಮ್ಮ ಪ್ರತಿಭಟನೆಯ ಭಾಗವಾಗಿ ಸಂಸತ್‌ ಭವನವನ್ನು ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜಧಾನಿ ದೆಹಲಿಯಲ್ಲಿ ಸುಮಾರು 2,500 ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

ಜೊತೆಗೆ, ಅರೆಸೇನಾ ಪಡೆಗಳ 3,000 ಯೋಧರನ್ನು ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯ ಕೆಲವು ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಪ್ರತಿಭಟನೆಗಳು ಉಗ್ರ ಸ್ವರೂಪ ಪಡೆದಲ್ಲಿ ಅವುಗಳನ್ನು ನಿಯಂತ್ರಿಸುವ ಸಲುವಾಗಿ, ಜಲಫಿರಂಗಳಿಗಳು, ಅಶ್ರುವಾಯು ಸೆಲ್‌ಗ‌ಳನ್ನು ಜೋಡಿಸಿಟ್ಟುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೊದಲಿಗೆ, ಸಿಂಗೂರ್‌ ಗಡಿಯಿಂದ ದೆಹಲಿಯ ಜಂತರ್‌ ಮಂತರ್‌ಗೆ ಆಗಮಿಸಲಿರುವ ರೈತರು ಅಲ್ಲಿ ಬಹಿರಂಗ ಸಭೆ ನಡೆಸಿ, ಆನಂತರ ಸಂಸತ್‌ ಭವನದ ಕಡೆಗೆ ಜಾಥಾ ಹೊರಡಲಿದ್ದಾರೆ.

ಇದನ್ನೂ ಓದಿ :ಭಾರತೀಯ ವಾಯುಪಡೆ ಮತ್ತೆ 3 ರಫೇಲ್‌ ಯುದ್ಧ ವಿಮಾನಗಳ ಆಗಮನ

Advertisement

Udayavani is now on Telegram. Click here to join our channel and stay updated with the latest news.

Next