Advertisement

ದೇವೇಗೌಡರು ಪ್ರಧಾನಿಯಾಗಿದ್ದು, ಎಚ್ಡಿಕೆ ಸಿಎಂ ಆಗಿದ್ದು ಹೇಗೆಂದು ಮೊದಲು ಅರಿಯಲಿ: ತಿಮ್ಮಾಪುರ

03:25 PM Dec 06, 2020 | keerthan |

ಬೆಂಗಳೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಹೇಗೆ? ಅವರ ತಂದೆ ಪ್ರಧಾನಿಯಾಗಿದ್ದು ಹೇಗೆ ಎನ್ನುವುದನ್ನು ಅರಿತುಕೊಳ್ಳಲಿ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಕಾಂಗ್ರೆಸ್ ಪಕ್ಷದ ನೆರವಿನಿಂದ ಅಧಿಕಾರ ಅನುಭವಿಸಿದವರು ಎಂದರು.

ಬಿಜೆಪಿ ಜೊತೆ ಹೋಗಿ ಬಂದು ನಿಮಗೆ ರೂಢಿಯಿದೆ. ಆದರೆ ಬಿಜೆಪಿ ಜೊತೆ ಹೋಗಿ ಬಂದ ನಂತರ ಏನಾಯ್ತು? ಅದನ್ನೂ ನೀವು ಬಹಿರಂಗಪಡಿಸಬೇಕು ಎಂದು ಸವಾಲೆಸೆದರು.

ಇದನ್ನೂ ಓದಿ:ಸಿಎಂ ಆಗಿದ್ದಾಗ ಕುಮಾರಸ್ವಾಮಿಗೆ ಕಾಂಗ್ರೆಸ್ ಸರಿ ಇತ್ತಾ? :ಎಚ್.ಕೆ ಪಾಟೀಲ್

ಮೈತ್ರಿ ಸರ್ಕಾರದಲ್ಲಿ ನನಗೆ ಬಂದರು ಮತ್ತು ಒಳನಾಡು ಖಾತೆ ಸಿಕ್ಕಿತ್ತು. ಆದರೆ ನೀವು ಎಐಸಿಸಿ ಮಾತು ಧಿಕ್ಕರಿಸಿ ಖಾತೆ ಬದಲಿಸಿದಿರಿ, ರೇವಣ್ಣ ಮಾತು ಕೇಳಿ ಖಾತೆಯನ್ನೇ ನೀಡಲಿಲ್ಲ ಎಂದು ಆರೋಪಿಸಿದರು.

Advertisement

ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತಾಡಬೇಡಿ. ಕಾಂಗ್ರೆಸ್ ಪಕ್ಷದ ಬಗ್ಗೆಯೂ ಮಾತನಾಡಬೇಡಿ ಎಂದು ಎಚ್ ಡಿಕೆ ಗೆ ಆರ್.ಬಿ. ತಿಮ್ಮಾಪುರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next