Advertisement

ಡಿಕೆಶಿ ಸಮ್ಮುಖದಲ್ಲಿ ಕಿಮ್ಮನೆ, ಮಂಜುನಾಥ ಗೌಡ ಸಂಧಾನ

11:11 PM Apr 01, 2023 | Team Udayavani |

ಬೆಂಗಳೂರು: ತೀರ್ಥಹಳ್ಳಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ ಹಾಗೂ ಮಂಜುನಾಥ ಗೌಡ ಅವರ ನಡುವೆ ಸಂಧಾನ ನಡೆಸಿ ಕಿಮ್ಮನೆ ಅವರ ಪರವಾಗಿ ಕೆಲಸ ಮಾಡುವಂತೆ ಸೂಚಿಸಲಾಗಿದೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಿಮ್ಮನೆ ಹಾಗೂ ಮಂಜುನಾಥ ಗೌಡ ಅವರನ್ನು ಜತೆಯಾಗಿ ಕೂರಿಸಿಕೊಂಡು ಇಬ್ಬರು ಮುಖಂಡರ ಬೆಂಬಲಿಗರೊಂದಿಗೆ ಸಭೆ ನಡೆಸಿ ಪಕ್ಷದ ವರಿಷ್ಠರು ಕಿಮ್ಮನೆ ಅವರಿಗೆ ಟಿಕೆಟ್‌ ಕೊಡಲು ನಿರ್ಧರಿಸಿದ್ದಾರೆ.

ಅದರಂತೆ ಅವರ ಪರವಾಗಿ ಎಲ್ಲರೂ ಕೆಲಸ ಮಾಡಬೇಕು, ಇದು ಪಕ್ಷದ ನಿರ್ಧಾರ. ಮುಂದೆ ಮಂಜುನಾಥ ಗೌಡರಿಗೂ ಪಕ್ಷದಲ್ಲಿ ಒಳ್ಳೆಯ ಭವಿಷ್ಯವಿದೆ. ಜತೆಗೆ ಹಲವು ಅವಕಾಶಗಳು ಸಿಗಲಿವೆ ಎಂದು ಭರವಸೆ ನೀಡಿ ಎಲ್ಲರನ್ನೂ ಸಮಾಧಾನಪಡಿಸಿ ಕಳುಹಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next