Advertisement

ಸಾವರ್ಕರ್‌ ನಿರ್ಣಯಕ್ಕೆ ಮಹಾರಾಷ್ಟ್ರ ವಿಧಾನಸಭೆ ನಕಾರ

12:56 AM Feb 27, 2020 | Hari Prasad |

ಮುಂಬಯಿ: ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್‌ ಅವರನ್ನು ಗೌರವಿಸುವ ನಿರ್ಣಯವನ್ನು ಸರಕಾರ ಅಂಗೀಕರಿಸಬೇಕು ಎಂದು ಬಿಜೆಪಿ ಇರಿಸಿದ್ದ ಬೇಡಿಕೆಯನ್ನು ಮಹಾರಾಷ್ಟ್ರ ವಿಧಾನಸಭೆ ಸ್ವೀಕರ್‌ ತಿರಸ್ಕರಿಸಿದ್ದಾರೆ.

Advertisement

ಇದರಿಂದ ಆಕ್ರೋಶಗೊಂಡಿರುವ ಮಾಜಿ ಸಿಎಂ ಫ‌ಡ್ನವೀಸ್‌, ಶಿವಸೇನೆ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರದ ಆಸೆಗಾಗಿ ಶಿವಸೇನೆ ಅಸಹಾಯಕವಾಗಿದೆ ಎಂದಿದ್ದಾರೆ. ಜತೆಗೆ, ಕಾಂಗ್ರೆಸ್‌ ಹೊರತರುವ ಶಿದೋರಿ ನಿಯತಕಾಲಿಕೆಯನ್ನು ನಿಷೇಧಿಸುವಂತೆಯೂ ಬಿಜೆಪಿ ಆಗ್ರಹಿಸಿತ್ತು.

ಶಿದೋರಿಯಲ್ಲಿ ಸಾವರ್ಕರ್‌ ಸ್ವಾತಂತ್ರ್ಯ ವೀರ ಅಲ್ಲ, ಕ್ಷಮಾಪಣಾ ವೀರ ಎಂದು ಬಣ್ಣಿಸಲಾಗಿತ್ತು. ಸಾವರ್ಕರ್‌ಗೆ ಮಾಡುತ್ತಿರುವ ಅವಮಾನವನ್ನು ಜನರ ಬಳಿ ಒಯ್ಯುತ್ತೇವೆ ಎಂದು ಫ‌ಡ್ನವೀಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next