Advertisement

WC;ಸೋತ ನಂತರ ಪ್ರಧಾನಿ ಆಟಗಾರರನ್ನು ಭೇಟಿಯಾದದ್ದು ಈ ಹಿಂದೆ ನೋಡಿಲ್ಲ: ಸೆಹವಾಗ್

07:16 PM Nov 25, 2023 | Team Udayavani |

ಹೊಸದಿಲ್ಲಿ: ”ಪಂದ್ಯವೊಂದರಲ್ಲಿ ಸೋತ ನಂತರ ಪ್ರಧಾನಿಯೊಬ್ಬರು ತಂಡದ ಆಟಗಾರರನ್ನು ಭೇಟಿಯಾಗಿ ಅವರನ್ನು ಪ್ರೇರೇಪಿಸುವುದನ್ನು ನಾನು ಈ ಹಿಂದೆ ನೋಡಿಲ್ಲ” ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಹೇಳಿದ್ದಾರೆ.

Advertisement

ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ ”ನಮ್ಮ ಪ್ರಾರ್ಥನೆಗಳನ್ನು ಪ್ರೋತ್ಸಾಹಿಸಲು ಮತ್ತು ಆಟಗಾರರನ್ನು ಬೆಂಬಲಿಸಲು ಪ್ರಧಾನಿ ಮೋದಿಯವರದ್ದು ದೊಡ್ಡ ನಡೆಯಾಗಿದೆ. ಮುಂದಿನ ವಿಶ್ವಕಪ್‌ನಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಲು ಇದು ಸಹಾಯ ಮಾಡುತ್ತದೆ” ಎಂದರು.

”ಕ್ರಿಕೆಟ್, ಹಾಕಿ, ಫುಟ್ಬಾಲ್ ಯಾವುದೇ ಕ್ರೀಡೆ ಇರಲಿ ದೇಶದ ಪ್ರಧಾನಿ ಆಟಗಾರರನ್ನು ಭೇಟಿ ಮಾಡಿ ಪ್ರೋತ್ಸಾಹಿಸಿದರೆ ಅದು ಆಟಗಾರರಿಗೆ ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸವನ್ನು ನೀಡುತ್ತದೆ” ಎಂದು ಸೆಹವಾಗ್ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ.

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಡ್ರೆಸ್ಸಿಂಗ್ ರೂಮ್ ಗೆ ತೆರಳಿ ಆಟಗಾರನ್ನು ಸಂತೈಸಿದ್ದರು. ವಿಶೇಷವಾಗಿ ಮೊಹಮದ್ ಶಮಿ ಅವರನ್ನು ಎದೆಗಾನಿಸಿಕೊಂಡು ಧೈರ್ಯ ತುಂಬಿ ಇದೆಲ್ಲ ಸಂಭವಿಸುತ್ತದೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next