Advertisement

ಚಿತ್ತೂರು ಕ್ಷೇತ್ರದ ಮಾಜಿ ಕಾಂಗ್ರೆಸ್‌ ಶಾಸಕ ಸಿಕೆ ಬಾಬು ಬಿಜೆಪಿಗೆ

04:14 PM Nov 07, 2017 | Team Udayavani |

ವಿಜಯವಾಡ : ಚಿತ್ತೂರು ಕ್ಷೇತ್ರದ ಮಾಜಿ ಕಾಂಗ್ರೆಸ್‌ ಶಾಸಕ ಸಿ ಕೆ ಬಾಬು ಅವರಿಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಹರಿ ಬಾಬು ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. 

Advertisement

ಹರಿ ಬಾಬು ಮತ್ತು ಮಾಜಿ ಕೇಂದ್ರ ಸಚಿವರಾದ ಡಿ ಪುರಂದೇಶ್ವರಿ ಅವರು ಸಿ ಕೆ ಬಾಬು ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಬಾಬು ಅವರೊಂದಿಗೆ ಅವರ ಹಲವು ಹಿಂಬಾಲಕರು ಇದೇ ಸಂದರ್ಭದಲ್ಲಿ ಬಿಜೆಪಿ ಸೇರಿದರು. 

ಬಿಜೆಪಿ ಸೇರಿದ ಸಿ ಕೆ ಬಾಬು ಅವರು ಈ ಸಂದರ್ಭದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ಮತ್ತು ಜನ ಕಲ್ಯಾಣ ಉಪಕ್ರಮಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಅವರ ನಾಯಕತ್ವದಲ್ಲಿ ಭಾರತವು “ಹೊಸ ಭಾರತ’ ವಾಗಿ ಉದಯಿಸುವುದೆಂಬ ವಿಶ್ವಾಸವಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next