Advertisement

ರಾಜ್ಯ ಕಾಂಗ್ರೆಸ್‌ ಚುನಾವಣಾ ಸಮಿತಿ ರಚನೆ

06:10 AM Feb 26, 2018 | Team Udayavani |

ಬೆಂಗಳೂರು: ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್‌, 2018ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚುನಾವಣಾ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ.

Advertisement

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಒಟ್ಟು 43 ಸದಸ್ಯರ ಚುನಾವಣಾ ಸಮಿತಿ ರಚಿಸಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆದೇಶ ಹೊರಡಿಸಿದ್ದಾರೆ.

ಈ ಮೂವರನ್ನು ಹೊರತುಪಡಿಸಿ ಸಮಿತಿಯಲ್ಲಿ ಆಸ್ಕರ್‌ ಫ‌ರ್ನಾಂಡೀಸ್‌, ಡಿ.ಕೆ.ಶಿವಕುಮಾರ್‌, ಎಸ್‌.ಆರ್‌.ಪಾಟೀಲ್‌ ದಿನೇಶ್‌ ಗುಂಡೂರಾವ್‌, ಡಾ.ಎಂ.ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್‌, ಕೆ.ಎಚ್‌.ಮುನಿಯಪ್ಪ, ಮಾರ್ಗರೇಟ… ಆಳ್ವಾ, ಅಲ್ಲಂ ವೀರಭದ್ರಪ್ಪ, ಆರ್‌.ವಿ.ದೇಶಪಾಂಡೆ, ರೆಹಮಾನ್‌ ಖಾನ್‌, ಎಚ್‌.ಕೆ.ಪಾಟೀಲ್‌, ಕೆ.ಜೆ.ಜಾರ್ಜ್‌, ರಾಮಲಿಂಗಾರೆಡ್ಡಿ, ರಮಾನಾಥ ರೈ, ಡಾ.ಎಚ್‌.ಸಿ.ಮಹಾದೇವಪ್ಪ, ಎಂ.ಬಿ.ಪಾಟೀಲ್‌, ಎಂ.ಕೃಷ್ಣಪ್ಪ, ಬಿ.ಎಲ್‌ ಶಂಕರ್‌, ಸಿ.ಎಂ.ಇಬ್ರಾಹಿಂ, ಮೋಟಮ್ಮ, ಸತೀಶ್‌ ಜಾರಕಿಹೊಳಿ, ರಾಣಿ ಸತೀಶ್‌, ಸಿ.ಎಸ್‌.ನಾಡಗೌಡ, ವಿನಯಕುಮಾರ್‌ ಸೊರಕೆ, ಕೃಷ್ಣಬೈರೇಗೌಡ, ಎಸ್‌.ಎಸ್‌.ಮಲ್ಲಿಕಾರ್ಜುನ್‌, ಸಂತೋಷ್‌ ಲಾಡ್‌, ಪಿ.ಟಿ.ಪರಮೇಶ್ವರ ನಾಯ್ಕ, ಶಿವರಾಜ್‌ ತಂಗಡಗಿ, ಉಮಾಶ್ರೀ, ರೋಷನ್‌ ಬೇಗ್‌, ಅಂಬರೀಶ್‌, ಕೆ.ಬಿ.ಕೃಷ್ಣಮೂರ್ತಿ, ಸಲೀಮ್‌ ಅಹಮದ್‌, ನರಸಿಂಗರಾವ್‌ ಸೂರ್ಯವಂಶಿ, ಬಸನಗೌಡ ಬಾದರ್ಲಿ, ಲಕ್ಷಿ$¾à ಹೆಬ್ಟಾಳ್ಕರ್‌, ಎಚ್‌.ಎಸ್‌.ಮಂಜುನಾಥ್‌, ಪ್ಯಾರೇಜಾನ್‌ ಇದ್ದಾರೆ.

ಅದಲ್ಲದೆ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಹಾಗೂ ರಾಜ್ಯದ ಕಾಂಗ್ರೆಸ್‌ ಸಂಸದರು ಸಮಿತಿಗೆ ಆಹ್ವಾನಿತರಾಗಿರುತ್ತಾರೆ ಎಂದು ರಾಹುಲ್‌ ಗಾಂಧಿ ಸೂಚನೆಯಂತೆ ಆದೇಶ ಹೊರಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next