Advertisement

Drugs: ಡ್ರಗ್ಸ್‌ ಪೆಡ್ಲಿಂಗ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳು ಶಾಮೀಲು – ಡಾ.ಜಿ.ಪರಮೇಶ್ವರ್‌

10:27 PM Jun 16, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ಮಾದಕ ವಸ್ತುಜಾಲದಲ್ಲಿ ವಿದೇಶಿ ವಿದ್ಯಾರ್ಥಿಗಳು ಶಾಮೀಲಾಗಿರುವ ಮಾಹಿತಿ ಸಿಕ್ಕಿದೆ. ಈಗಾಗಲೆ ಕುಖ್ಯಾತ ಡ್ರಗ್ಸ್‌ ಪೆಡ್ಲರ್‌ಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಮೂಲಕ ಮಾದಕ ವಸ್ತು ದಂಧೆಗೆ ಕಡಿವಾಣ ಹಾಕಲು ವಿವಿಧ ಯೋಜನೆ ರೂಪಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Advertisement

ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮಾದಕ ವಸ್ತು ದಂಧೆಯಲ್ಲಿ ಮುಖ್ಯವಾಗಿ ವಿದೇಶಿ ವಿದ್ಯಾರ್ಥಿಗಳು ಶಾಮೀಲಾಗಿರುವ ಸುಳಿವು ಸಿಕ್ಕಿದೆ. ಸಂಬಂಧಪಟ್ಟ ದೇಶದ ರಾಯಭಾರಿಗಳಿಗೆ ವಿದೇಶಾಂಗ ಸಚಿವಾಲಯದ ಮೂಲಕ ತಿಳಿಸುತ್ತೇವೆ. ಅವರು ಅಪರಾಧ ಎಸಗಿದ್ದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದರು.

ಒಂದು ವರ್ಷ ಅವಧಿಗೆ ವೀಸಾ ತೆಗೆದುಕೊಂಡು ಬಂದು 10 ವರ್ಷ ಇರುತ್ತಾರೆ. ವೀಸಾ ಅವಧಿ ಮುಕ್ತಾಯಗೊಂಡರೂ ನೆಲೆಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. 106 ಮಂದಿಯನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. ಬೆಂಗಳೂರನ್ನು ಡ್ರಗ್ಸ್‌ ಸೆಂಟರ್‌ ಮಾಡಲು ಬಿಡುವುದಿಲ್ಲ. ಡ್ರಗ್ಸ್‌ ಮುಕ್ತ ಬೆಂಗಳೂರು ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಆ ದೃಷ್ಟಿಯಲ್ಲಿ ಕಠಿಣವಾಗಿರುವ ಕ್ರಮ ತೆಗೆದುಕೊಳ್ಳುತ್ತೇವೆಂದು ತಿಳಿಸಿದರು.

ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಪ್ರಕರಣಗಳು ಏರಿಕೆಯಾಗಿವೆ. ಆದರೆ, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳುವುದಕ್ಕೆ ಕಷ್ಟ ಆಗಬಹುಹುದು. ಬೇರೆ ಮೆಟ್ರೋ ಪಾಲಿಟನ್‌ ಸಿಟಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಡ್ರಗ್ಸ್‌ ಪ್ರಕರಣ ಕಡಿಮೆಯಿದೆ. ಪೊಲೀಸ್‌ ಅಧಿಕಾರಿಗಳು ಶಾಲಾ, ಕಾಲೇಜುಗಳಿಗೆ ತೆರಳಿ ಡ್ರಗ್ಸ್‌ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದರು.
ಮರಳು ದಂಧೆಗೆ ಕಡಿವಾಣ
ಭೀಮಾ ನದಿಯಲ್ಲಿ ಬಹಳ ದಿನಗಳಿಂದ ಮರಳು ದಂಧೆ ನಡೆಯುತಿದ್ದು, ಜಿಲ್ಲಾಧಿಕಾರಿ ಸಹಕಾರದೊಂದಿಗೆ ಇಂತಹ ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಮರಳು ಸಾಗಣೆ ಟ್ರಾಕ್ಟರ್‌ ಹರಿಸಿ ಹೆಡ್‌ ಕಾನ್‌ಸ್ಟೆàಬಲ್‌ ಹತ್ಯೆ ಮಾಡಿರುವ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಮರಳು ದಂಧೆ ನಿಯಂತ್ರಿಸುವುದು ಕಂದಾಯ, ಗಣಿ ಹಾಗೂ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯಾಗಿದ್ದು, ಪೊಲೀಸ್‌ ಇಲಾಖೆ ಇದಕ್ಕೆ ಸಹಕಾರ ಕೊಡಲಿದೆ. ಸಂಬಂಧಿಸಿದ ಇಲಾಖೆ ಜತೆಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆಯೂ ವಿವಿಧ ಜಿಲ್ಲೆಗಳಲ್ಲಿ ಮರಳು ದಂಧೆ ನಡೆಯುತ್ತಿತ್ತು. ಇದನ್ನು ಆದಷ್ಟು ನಿಯಂತ್ರಿಸಿದ್ದೇವೆ. ಉಡುಪಿಯಲ್ಲಿ ಜಿಲ್ಲಾಧಿಕಾರಿ ಮೇಲೆಯೇ ಲಾರಿ ಹರಿಸಲು ಯತ್ನಿಸಿದ ಪ್ರಕರಣವೂ ನಡೆದಿದೆ. ಅಂತಹ ಪ್ರಕರಣ ನಿಯಂತ್ರಣಕ್ಕೆ ಬಂದಿದೆ ಎಂದು ವಿವರಿಸಿದರು.

ಕನಿಷ್ಠ ವರ್ಗಾವಣೆ: ಪೊಲೀಸ್‌ ವರ್ಗಾವಣೆ ದಂಧೆ ಬಗ್ಗೆ ಉತ್ತರಿಸಿದ ಅವರು, ಪೊಲೀಸ್‌ ವರ್ಗಾವಣೆ ದಂಧೆ ನಡೆಸಲು ನಾನು ಬಿಡುವುದಿಲ್ಲ. ಕನಿಷ್ಠ ವರ್ಗಾವಣೆ ನಡೆಸಲಾಗುವುದು. ಪಿಎಸ್‌ಐ ನೇಮಕ ಹಗರಣ ಕುರಿತು ನ್ಯಾಯಾಲಯ ನಿರ್ದೇಶನ ನೀಡುವ ಆಧಾರದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next