Advertisement

ವಿದೇಶಿ ವಿದ್ಯಾರ್ಥಿಗಳಿಗೆ ಥಳಿತ: ಐವರ ಬಂಧನ

11:21 PM Mar 28, 2017 | Team Udayavani |

ಗ್ರೇಟರ್‌ ನೋಯ್ಡಾ/ನವದೆಹಲಿ: ಗ್ರೇಟರ್‌ ನೋಯ್ಡಾದಲ್ಲಿ ನೈಜೀರಿಯಾದ ನಾಲ್ವರು ವಿದ್ಯಾರ್ಥಿಗಳನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಅದರ ಬಗ್ಗೆ ವಿದೇ ಶಾಂಗ ಇಲಾಖೆ ಕಳವಳ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜತೆ ಮಾತುಕತೆ ನಡೆಸಿದ್ದರು. ಅದಕ್ಕೆ ಪೂರಕ ವಾಗಿ ನವದೆಹಲಿಯಲ್ಲಿ ಆಫ್ರಿಕ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವೂ ವಿದೇಶಾಂಗ ಸಚಿವರನ್ನು ಭೇಟಿಯಾಗಿತ್ತು.

Advertisement

ಮಾದಕ ವಸ್ತು ಸೇವನೆಯಿಂದ ಅಸುನೀಗಿದ್ದ ವಿದ್ಯಾರ್ಥಿಯೊಬ್ಬನ ಸ್ಮರಣಾರ್ಥವಾಗಿ ಕ್ಯಾಂಡಲ್‌ ಲೈಟ್‌ ಮೆರವಣಿಗೆ ನಡೆಸುತ್ತಿದ್ದಾಗ ಗುಂಪೊಂದು ಸೋಮವಾರ ರಾತ್ರಿ ವಿದ್ಯಾರ್ಥಿಗಳನ್ನು ಥಳಿಸಿ ಗಾಯಗೊಳಿಸಿತ್ತು. ಈ ಪ್ರಕರಣದಿಂದ ಆಕ್ರೋಶಗೊಂಡ ನೈಜೀರಿಯಾ ಹೈಕಮಿಷನ್‌ ಕಚೇರಿ ದೇಶದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಸುರಕ್ಷಿತ ವಾತಾವರಣ ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು. ವಿದೇಶಾಂಗ ಖಾತೆ ಸಹಾಯಕ ಸಚಿವ ಎಂ.ಜೆ.ಅಕºರ್‌ ಕೂಡ ಹೈಕಮಿಷನರ್‌ ಜತೆ ಮಾತುಕತೆ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next