Advertisement

ಮಣ್ಣೂರು -ಸೂಗೂರು ಗ್ರಾಮವನ್ನು ಕಂಪ್ಲಿ ತಾಲೂಕಿಗೆ ಸೇರ್ಪಡೆ ಮಾಡಲು ಒತ್ತಾಯ

03:19 PM Mar 20, 2022 | Team Udayavani |

ಕುರುಗೋಡು: ಸಿರುಗುಪ್ಪ ತಾಲೂಕಿನ ಗಡಿ ಭಾಗದ ಗ್ರಾಮಗಳಾದ ಮಣ್ಣೂರು -ಸೂಗೂರು ಗ್ರಾಮಗಳನ್ನು ಹತ್ತಿರವಿರುವ ನೂತನ ತಾಲೂಕು ಕಂಪ್ಲಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಮಣ್ಣೂರು ಸೂಗೂರು ನಿಯೋಗ, ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

Advertisement

ಗ್ರಾಮದ ಮುಖಂಡರು ಮಾತನಾಡಿ, ನಮ್ಮೂರಿನಿಂದ ಸಿರುಗುಪ್ಪ 35 ಕಿ. ಮೀ ಮತ್ತು ಹೋಬಳಿ ಕೇಂದ್ರ ತೆಕ್ಕಲಕೋಟೆ 40 ಕಿ. ಮೀ ಅಂತರದಲ್ಲಿ ಇದೆ ಕಂಪ್ಲಿ ತಾಲೂಕು ಕೇಂದ್ರ ಕೇವಲ 15 ಕಿ. ಮೀ ಅಂತರದಲ್ಲಿ ಇರುವುದನ್ನು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಕಂಪ್ಲಿ ತಾಲೂಕು ಕೇಂದ್ರ ಘೋಷಿಸಿದ ಬಳಿಕ ಪ್ರಥಮ ಅಧಿಸೂಚನೆಯಲ್ಲಿ ಮಣ್ಣೂರು -ಸೂಗೂರನ್ನು ಕಂಪ್ಲಿ ತಾಲೂಕಿನಲ್ಲಿ ಸೇರ್ಪಡೆ ಮಾಡಲಾಗಿತ್ತು 2ನೇ ಅಧಿಸೂಚನೆಯಲ್ಲಿ ಕೈ ಬಿಡಲಾಗಿದೆ ಎಂದು ಸಚಿವರಿಗೆ ವಿವರವಾಗಿ ತಿಳಿಸಿದ್ದಾರೆ.

ಈ ಕುರಿತು ಈಗಾಗಲೇ ಎರಡು ಮೂರು ದಿನಗಳ ಹಿಂದೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೂ ಕೂಡ ಮಣ್ಣೂರು ಸೂಗೂರು ಗ್ರಾಮವನ್ನು ಕಂಪ್ಲಿ ತಾಲೂಕಿಗೆ ಸೇರ್ಪಡೆ ಮಾಡುವಂತೆ ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ನಿಯೋಗ ಮನವಿ ಮಾಡಿ ಅನುಕೂಲ ಮತ್ತು ಅನಾನುಕೂಲ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next