Advertisement

ರಸ್ತೆಯಲ್ಲಿರುವ ಮಣ್ಣು ತೆರವುಗೊಳಿಸಲು ಒತ್ತಾಯ

01:12 PM Apr 12, 2017 | Team Udayavani |

ಎಚ್‌.ಡಿ.ಕೋಟೆ: ಗುತ್ತಿಗೆದಾರರೊಬ್ಬರ ಹೆಸರಿನಲ್ಲಿ ಪುರಸಭೆ ಅಧ್ಯಕ್ಷೆ ಮಂಜುಳಾ ಪತಿಯೇ ಚರಂಡಿ ಕಾಮಗಾರಿಯೊಂದನ್ನು ನೆರವೇರಿಸಿ ಡಾಂಬರ್‌ ರಸ್ತೆ ಮಧ್ಯೆ ಸುರಿದಿದ್ದ ಮಣ್ಣು ಶುಚಿಗೊಳಿಸದೇ ರಸ್ತೆ ಸಂಚಾರಕ್ಕೆ ಸಂಚಕಾರವಾಗುತ್ತಿದ್ದರೂ ಪುರಸಭೆ ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದೆ.

Advertisement

9ನೇ ವಾರ್ಡ್‌ನ ವಿಶ್ವನಾಥಯ್ಯ ಕಾಲೋನಿಯ ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ಗುತ್ತಿಗೆದಾರರೊಬ್ಬರ ಹೆಸರಿನಲ್ಲಿ ತಮ್ಮದಾಗಿಸಿಕೊಂಡ ಮಂಜುಳಾ ಪತಿ ಗೋವಿಂದಾಚಾರ್‌ ಚರಂಡಿ ಕಾಮಗಾರಿ ಪೂರ್ಣಗೊಂಡ ಬಳಿಕ ಗುಂಡಿ ಮಚ್ಚಿಸುವ ಸಲುವಾಗಿ ಲಾರಿಗಳಿಂದ ವಿಶ್ವನಾಥಯ್ಯ ಕಾಲೋನಿಯ ಡಾಂಬರ್‌ ರಸ್ತೆ ಮಧ್ಯೆಯೇ ಮಣ್ಣು ಸುರಿಸಲಾಗಿತ್ತು.

ಬಳಿಕ ಜೆಸಿಬಿ ಯಂತ್ರದಿಂದ ನೆಪಮಾತ್ರಕ್ಕೆ ಲಾರಿಯಿಂದ ರಸ್ತೆ ಮಧ್ಯೆ ಸುರಿದಿದ್ದ ಮಣ್ಣು ಸಮತಟ್ಟು ಮಾಡಿದ ಗುತ್ತಿಗೆದಾರ ರಸ್ತೆಯಲ್ಲಿ ಸುರಿದಿರುವ ಮಣ್ಣು ಶುಚಿಗೊಳಿಸಲು ಮುಂದಾಗಿಲ್ಲ. ಸೋಮವಾರ ರಾತ್ರಿ ಪಟ್ಟಣದಲ್ಲಿ ಬಿದ್ದ ಮಳೆಗೆ ಡಾಂಬರ್‌ ರಸ್ತೆಯಲ್ಲಿ ಸುರಿದಿದ್ದ ಮಣ್ಣು ಕೆಸರು ಗದ್ದೆಯಂತಾಗಿದೆ. ರಾತ್ರಿ ವೇಳೆ ಬೀದಿ ದೀಪ ಇಲ್ಲದ ಈ ರಸ್ತೆಯಲ್ಲಿ ದ್ವಿಚಕ್ರವಾಹನ ಸವಾರರು ಮಣ್ಣು ಸುರಿದಿರುವುದು ತಿಳಿಯದೆ ವೇಗವಾಗಿ ಬಂದು ಬಿದ್ದ ಅನೇಕ ಘಟನೆಗಳು ನಡೆದಿವೆ.

ಅಧ್ಯಕ್ಷರ ಮನೆಯ ಎದುರಿನಲ್ಲಿ ಚರಂಡಿ ಕಾಮಗಾರಿಗೂ ಮುನ್ನ ಸುಸ್ಥಿತಿ ಯಲ್ಲಿದ್ದ ರಸ್ತೆ ಬಳಿಕ ಹದಗೆಟ್ಟು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದರೂ ಸಂಬಂಧ ಗುತ್ತಿಗೆದಾರನಿಗೆ ಕಾಮಗಾರಿ ಹಕ್ಕು ನೀಡಿದ್ದ ಪುರಸಭೆ ಮಾತ್ರ ಕಂಡು ಕಾಣದಂತೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪುರಸಭೆ ಕೂಡಲೆ ರಸ್ತೆ ದುರಸ್ತಿಗೊಳಿಸಬೇಕು ಎಂಬುದು ಇಲ್ಲಿನ ಜನರ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next