Advertisement

ಪಾಲಿಕೆಯ 30 ಸದಸ್ಯರ ಅನರ್ಹತೆಗೆ ಒತ್ತಾಯ

12:23 AM May 02, 2019 | Team Udayavani |

ಬೆಂಗಳೂರು: ನಾಲ್ಕು ವರ್ಷಗಳಿಂದ ಆಸ್ತಿ ವಿವರ ಘೋಷಣೆ ಮಾಡದ 30 ಮಂದಿ ಪಾಲಿಕೆ ಸದಸ್ಯರು ಕೆಎಂಸಿ ಕಾಯ್ದೆ ಉಲ್ಲಂ ಸಿದ್ದು, ಅವರ ಸದಸ್ಯತ್ವ ಅನರ್ಹಗೊಳಿಸಬೇಕೆಂದು ನವ ಭಾರತ ಪ್ರಜಾಪ್ರಭುತ್ವ ಸಂಘಟನೆ ರಾಜ್ಯಾಧ್ಯಕ್ಷ ಅನಿಲ್‌ ಶೆಟ್ಟಿ ಸುದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Advertisement

ಬಿಬಿಎಂಪಿ ಸದಸ್ಯರು ಚುನಾಯಿತರಾದ ದಿನಾಂಕದಿಂದ ಒಂದು ತಿಂಗಳ ಮೀರದಂತೆ ಪ್ರತಿ ವರ್ಷ ತಮ್ಮ ಎಲ್ಲ ಆಸ್ತಿ ವಿವರವನ್ನು ಮೇಯರ್‌ಗೆ ಸಲ್ಲಿಸಬೇಕು. ಆದರೆ, ಬಿಜೆಪಿಯ 9 ಹಾಗೂ ಕಾಂಗ್ರೆಸ್‌-ಜೆಡಿಎಸ್‌ನ 21 ಸದಸ್ಯರು 4 ವರ್ಷಗಳಿಂದ ಒಮ್ಮೆ ಕೂಡ ಆಸ್ತಿ ವಿವರ ಘೋಷಿಸಿಲ್ಲ. ಜತೆಗೆ 6 ಸದಸ್ಯರು ಸುಳ್ಳು ಆಸ್ತಿ ವಿವರ ಸಲ್ಲಿಸಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.

ಕೆ.ಎಂ.ಮಮತಾ, ಎಂ.ವೇಲುನಾಯಕರ್‌, ಬಿ.ಎನ್‌.ಜಯಪ್ರಕಾಶ್‌, ಎಂ.ಎನ್‌.ಶ್ರೀಕಾಂತ್‌, ಜಿ.ಮೋಹನ್‌ ಕುಮಾರ್‌, ಎನ್‌.ರಮೇಶ್‌, ಫ‌ರಿದಾ ಇಸ್ತಿಯಾಕ್‌, ಜಿ.ಬಾಲಕೃಷ್ಣ, ಆರ್‌.ವಿ.ಯುವರಾಜ್‌, ಡಿ.ಪ್ರಮೋದ್‌, ಎಂ.ಗಾಯಿತ್ರಿ, ಅಜ್ಮಲ್‌ ಬೇಗ್‌, ಜಿ.ಮಂಜುನಾಥ್‌, ಎನ್‌.ನಾಗರಾಜು ಹಾಗೂ ಎಸ್‌.ಅನ್ಸಾರ್‌ ಪಾಷ ನಾಲ್ಕು ವರ್ಷಗಳಿಂದ ಆಸ್ತಿ ವಿವರ ಸಲ್ಲಿಸಿಲ್ಲ. ಆಸ್ತಿ ವಿವರ ಸಲ್ಲಿಸದ ಸದಸ್ಯರ ಸದಸ್ಯತ್ವ ರದ್ದುಗೊಳಿಸಲು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಈಗಾಗಲೇ ಈ 30 ಪಾಲಿಕೆ ಸದಸ್ಯರ ಪಟ್ಟಿಯನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೂ ತಲುಪಿಸಲಾಗಿದೆ. ಆದರೆ, ಅವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕಾರಣ, ವಿಷಯವನ್ನು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್‌ ಅವರ ಗಮನಕ್ಕೆ ತರಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next