Advertisement

ವಾರ್ಡ್‌ ನಿವಾಸಿಗಳಿಗೆ ಆಹಾರ ಕಿಟ್‌ ವಿತರಣೆ

06:13 PM May 27, 2021 | Team Udayavani |

ಗುಂಡ್ಲುಪೇಟೆ: ಪಟ್ಟಣದ 21ನೇ ವಾರ್ಡ್‌ನ 400ಕ್ಕೂ ಹೆಚ್ಚು ಕುಟುಂಬಗಳಿಗೆ ಪುರಸಭಾ ಸದಸ್ಯ ಎನ್‌.ಕುಮಾರ್‌ ಆಹಾರದ ಕಿಟ್‌ ವಿತರಿಸಿದರು.

Advertisement

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಆಹಾರದ ಕಿಟ್‌ ವಿತರಿಸಿ ಮಾತನಾಡಿದ ಅವರು, 21ನೇ ವಾರ್ಡ್‌ನಲ್ಲಿ ಬಹುತೇಕ ಮಂದಿಬಡವರಿದ್ದಾರೆ. ಇವರು ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡುಆಹಾರ ಪದಾರ್ಥ ನೀಡಲಾಗುತ್ತಿದೆ ಎಂದರು.

ಈ ವೇಳೆ ವಾರ್ಡ್‌ನ ಮನೆ ಮನೆಗೂ ತೆರಳಿ ಆಹಾರ ಪದಾರ್ಥದಕಿಟ್‌ ಜೊತೆಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿ ಕೊರೊನಾ ಕುರಿತುಜಾಗೃತಿ ಮೂಡಿಸಿದರು. ಪಡಿತರ ಕಿಟ್‌ನಲ್ಲಿ ಈರುಳ್ಳಿ, ಮೈದಾ-ಗೋಧಿಹಿಟ್ಟು, ಸಕ್ಕರೆ, ಅಕ್ಕಿ, ಎಣ್ಣೆ, ಬೆಲ್ಲ ಮತ್ತಿತರ ವಸ್ತುಗಳು ಇವೆ. ಈಸಂದರ್ಭದಲ್ಲಿ ಮುದ್ದಪ್ಪ, ರಾಜೇಶ್‌, ದೊರೆಸ್ವಾಮಿ, ಸುರೇಶ್‌, ಕುಮಾರ್‌,ಮಹೇಶ್‌, ಅನಿಲ್‌, ಸುನಿಲ್‌, ಮೂರ್ತಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next