Advertisement

ದಿನಸಿ ಕಿಟ್‌ ವಿತರಣೆ

09:08 PM Jun 14, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆ ಮತ್ತು ತಾಲೂಕಿನ ಕನ್ನಡ ಕ್ರೈಸ್ತರರಕ್ಷಣಾ ವೇದಿಕೆಯಿಂದ ಜಿಲ್ಲಾಧ್ಯಕ್ಷ ಜೆ.ಸುರೇಶ್‌ಬಾಬುಅವರ ಪತ್ನಿ ರಾಣಿ ಅವರ ಹುಟ್ಟುಹಬ್ಬದ ಅಂಗವಾಗಿ ಕೋವಿಡ್‌ನಿಂದ ಕಷ್ಟದಲ್ಲಿರುವ ದಿವ್ಯಾಂಗರಿಗೆ, ಬಡಜನರಿಗೆ ದಿನಸಿ ವಿತರಿಸಿ, ಊಟದ ವ್ಯವಸ್ಥೆಮಾಡಲಾಗಿತ್ತು.

Advertisement

ಈ ವೇಳೆ ಸುರೇಶ್‌ ಬಾಬು ಮಾತನಾಡಿ,ಒಂದೂವರೆ ವರ್ಷದಿಂದ ಕೋವಿಡ್‌-19ನಿಂದ ಜನತೆಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ದಿವ್ಯಾಂಗರಿಗೆ, ಬಡ ಜನರಿಗೆದಿನಸಿ ಕಿಟ್‌ ಜೊತೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ನಮ್ಮ ಸಂಘಟನೆ ವತಿಯಿಂದ ಅನೇಕ ಸಮಾಜಮುಖೀ ಕೆಲಸಗಳನ್ನು ಮಾಡುತ್ತಲೇ ಬರುತ್ತಿದ್ದೇವೆ.

ಇನ್ನು ಮುಂದೆಯೂ ನಮ್ಮ ಸಂಘಟನೆ ಸಮಾಜಮುಖೀಕೆಲಸ ಮಾಡುತ್ತದೆ ಎಂದು ತಿಳಿಸಿದರು.ಸಿಎಸ್‌ಐ ಸಭಾಪಾಲಕರಾದ ಸೋಲೋಮನ್‌ಪಾಲ್‌ ಅಯ್ಯಣ್ಣ, ರಾಣಿ, ರತ್ನಮ್ಮ,ಕುಟುಂಬದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next