Advertisement
ಶಾಸಕಿ ಶಕುಂತಳಾ ಟಿ. ಶೆಟ್ಟಿ ಗಿಡ ನೆಟ್ಟು ಉದ್ಘಾಟಿಸಿ ಮಾತನಾಡಿ, ಹಸಿರು ಸಂಪತ್ತು ವೃದ್ಧಿಯಿಂದ ಪರಿಸರದಲ್ಲಿ ಸಮತೋಲನ ಉಂಟಾಗಲು ಸಾಧ್ಯವಿದೆ. ಹಾಗಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಗಿಡ ನೆಟ್ಟರೆ ಮಾತ್ರ ಸಾಲದು. ನೆಟ್ಟ ಗಿಡವನ್ನು ಉಳಿಸುವ ನಿಟ್ಟಿನಲ್ಲೂ ನಮ್ಮ ಗಮನ ಇರಬೇಕು ಎಂದರು.
ಪ್ರಕೃತಿ ವಿಕೋಪಕ್ಕೆ ಪರಿಸರದಲ್ಲಿನ ಅಸಮತೋಲನ ಕಾರಣ. ಹಸಿರು ಸಂಪತ್ತನ್ನು ನಾಶ ಮಾಡುವ ಬದಲು ಉಳಿಸುವ ಅಗತ್ಯ ಇಂದಿದೆ. ಇಲ್ಲದಿದ್ದರೆ ಬರ, ಮಳೆ ಅಭಾವ ತೀವ್ರ ಸ್ವರೂಪ ಪಡೆದುಕೊಳ್ಳುವ ಅಪಾಯವಿದೆ ಎಂದು ಅವರು ಹೇಳಿದರು. ಜಾಗೃತಿ ಮೂಡಿಸಿ
ಸಭಾಧ್ಯಕ್ಷತೆ ವಹಿಸಿದ್ದ ತಾ.ಪಂ. ಸದಸ್ಯ ರಾಧಾಕೃಷ್ಣ ಆಳ್ವ ಸಾಜ ಮಾತನಾಡಿ, ಮರ, ಗಿಡ ಸಂರಕ್ಷಿಸುವ, ಬೆಳೆಸುವ ಬಗ್ಗೆ ಹೆಚ್ಚು ಗಮನ ವಹಿಸಬೇಕು.
Related Articles
Advertisement
ವಲಯ ಅರಣ್ಯಾಧಿಕಾರಿ ವಿ.ಪಿ. ಕಾರ್ಯಪ್ಪ ಸ್ವಾಗತಿಸಿ, ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ವಂದಿಸಿದರು. ಉಪ ವಲಯ ಅರಣ್ಯಾಧಿ ಕಾರಿ ಸಂತೋಷ್ ಕೆ. ನಿರೂಪಿಸಿದರು. ಯೂಸುಫ್ ಮತ್ತು ಗಣೇಶ್ ಭಟ್ ಸಹಕಾರ ನೀಡಿದರು.
ಸಹಾಯಧನಎಸಿಎಫ್ ಸುಬ್ರಹ್ಮಣ್ಯ ರಾವ್ ಮಾತ ನಾಡಿ, ಅರಣ್ಯ ಇಲಾಖೆಯ ಮೂಲಕ ಹಸಿರು ಸಂಪತ್ತು ವರ್ಧನೆಗೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಕೃಷಿ ಪ್ರೋತ್ಸಾಹ ಯೋಜನೆಯಡಿ ಗಿಡ ಬೆಳೆಸುವವರಿಗೆ ಸಹಾಯಧನ ನೀಡಲಾಗುತ್ತಿದೆ. ಅದನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಅವರು ನುಡಿದರು.