Advertisement

ವಾರಿಯರ್ಸ್‌ಗೆ ಹೂ ಮಳೆ ನಮನ

12:03 PM May 04, 2020 | Suhan S |

ಬೆಂಗಳೂರು: ಕೋವಿಡ್ 19 ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ” ಕೋವಿಡ್ 19  ವಾರಿಯರ್ಸ್‌ಗೆ” ಭಾನುವಾರ ವಿಕ್ಟೋರಿಯಾ ಆಸ್ಪತ್ರೆ ಬಳಿ ಭಾರತೀಯ ವಾಯುಸೇನೆಯು ಹೂಮಳೆ ಸುರಿಸುವ ಮೂಲಕ ಗೌರವ ಸಲ್ಲಿಸಿತು.

Advertisement

ನಗರದ ಕೋವಿಡ್ 19  ಸೋಂಕಿತ ಚಿಕಿತ್ಸಾ ಕೇಂದ್ರವಾದ ವಿಕ್ಟೋರಿಯಾ ಆಸ್ಪತ್ರೆಯ ಬಳಿ ಬೆಳಗ್ಗೆ 10.30ಕ್ಕೆ ವೈದ್ಯರಿಗೆ – ವೈದ್ಯಕೀಯ ಸಿಬ್ಬಂದಿಗಳನ್ನು ಆಸ್ಪತ್ರೆ ಆವರಣದಲ್ಲಿ ಹಾಜರುಪಡಿಸಿ ವಾಯುಸೇನೆಯು ಹೆಲಿಕಾಪ್ಟರ್‌ ಮೂಲಕ ಹೂ ಮಳೆ ಸುರಿಸಿತು. ಬಳಿಕ ಕಮಾಂಡ್‌ ಆಸ್ಪತ್ರೆಯ ಮೇಲೂ ಹೂ ಮಳೆ ಸುರಿಸಲಾಯಿತು. ಹೆಲಿಕಾಪ್ಟರ್‌ ಮೂಲಕ ಹೂ ಹಾಕಿ ಗೌರವ ಸಲ್ಲಿಸಿದ ಹಿನ್ನೆಲೆ ವೈದ್ಯಕೀಯ ಸಿಬ್ಬಂದಿ ಅತೀವ ಸಂತಸ ಪಟ್ಟರು. ಸೇನೆಯ ಗೌರವ ಕಂಡು ಆತ್ಮ ವಿಶ್ವಾಸ ಹೆಚ್ಚಳವಾಯಿತು ಎಂದು ಹಲವು ಅಭಿಪ್ರಾಯಯಪಟ್ಟರು.

ಇನ್ನೊಂದೆಡೆ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಹಾಗೂ ವಿಧಾನಸೌಧದ ಆವರಣದಲ್ಲಿ ಇಂಡಿಯನ್‌ ಆರ್ಮಿ ಫೋರ್ಸ್‌ ಬ್ಯಾಂಡ್‌ ಪರೇಡ್‌ ನಡೆಸುವ ಮೂಲಕ ಕೋವಿಡ್ 19  ವಾರಿಯರ್ಸ್‌ಗೆ ನಮನ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next