Advertisement

ಪ್ರವಾಹದಿಂದ ತತ್ತರಿಸಿದ ಕರ್ನಾಟಕಕ್ಕೆ ಕೇಂದ್ರದಿಂದ 577 ಕೋಟಿ ಮುಂಗಡ ನೆರವು

03:46 PM Nov 13, 2020 | sudhir |

ನವದೆಹಲಿ : ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಕರ್ನಾಟಕದ ಕೆಲವು ರಾಜ್ಯಗಳು ತತ್ತರಿಸಿಹೋಗಿದ್ದು ಇದಕ್ಕೆ ಪರಿಹಾರವೆಂಬಂತೆ ಕೇಂದ್ರ ಸರಕಾರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಿಂದ 577.84 ಕೋಟಿ ರೂಪಾಯಿಗಳನ್ನು ಮುಂಗಡ ಪರಿಹಾರವಾಗಿ ಮಂಜೂರು ಮಾಡಿದೆ.

Advertisement

ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಮೊತ್ತವನ್ನು ಬಿಡುಗಡೆಮಾಡಲಿದೆ ಎಂದು ತಿಳಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದ ನಡೆದ ಸಭೆಯಲ್ಲಿ ಕರ್ನಾಟಕ ಸೇರಿ ಒಟ್ಟು ಆರು ರಾಜ್ಯಗಳಿಗೆ 4381.88 ಕೋಟಿ ರೂ. ನೆರವು ನೀಡಲು ಸೂಚಿಸಿದ್ದಾರೆ.

ಅದರಂತೆ ಕರ್ನಾಟಕಕ್ಕೆ 577.84 ಕೋಟಿ ರೂ, ಒಡಿಶಾಗೆ 128.33, ಪಶ್ಚಿಮ ಬಂಗಾಳಕ್ಕೆ 2707.77 ಕೋಟಿ ರೂ, ಮಧ್ಯಪ್ರದೇಶಕ್ಕೆ 611.61, ಕೋಟಿ ರೂ ನೆರವು ನೀಡಲು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next