Advertisement

ಪ್ರವಾಹಕ್ಕೆ ನಲುಗಿದ ಉ.ಕರ್ನಾಟಕ: ಹೆಚ್ಚುತ್ತಿದೆ ಸಾವಿನ ಸಂಖ್ಯೆ

10:03 AM Aug 09, 2019 | Team Udayavani |

ಧಾರವಾಡ/ಬೆಳಗಾವಿ: ಬಿಟ್ಟು ಬಿಡದೆ ಸುರಿಯುತ್ತಿರುವ ಮಹಾ ಮಳೆಗೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿದೆ. ಅನೇಕ ಗ್ರಾಮಗಳು ಜಲಾವೃತವಾಗಿದ್ದು, ಜನಜೀವನ ದುಸ್ಥರವಾಗಿದೆ. ಮಳೆಗೆ ಸಿಲುಕಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

Advertisement

ಪ್ರವಾಹಕ್ಕೆ ಬಲಿಯಾದ ಹತ್ತರ ಬಾಲಕಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ನಾಗರ ಮುನ್ನೋಳಿಯಲ್ಲಿ ಹಳ್ಳ ದಾಟಲು ಹೋದ ಹತ್ತು ವರ್ಷದ ಬಾಲಕಿ ನೀರು ಪಾಲಾದ ಘಟನೆ ನಡೆದಿದೆ.

ಶಿಲ್ಪಾ ಸಿದ್ದಪ್ಪ ಮನಗೂಳಿ ಎಂಬ ಬಾಲಕಿ ಮೃತಪಟ್ಟ ಬಾಲಕಿ. ಐದನೆಯ ತರಗತಿಯಲ್ಲಿ ಓದುತ್ತಿರುವ ಶಿಲ್ಪಾ ಸಿದ್ದಪ್ಪ ಮನಗೂಳಿ ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದಾಳೆ.

ಧಾರವಾಡ: ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ
ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಕುಂದಗೋಳದಲ್ಲಿ ಹಳ್ಳ ದಾಟಲು ಹೋಗಿ ವ್ಯಕ್ತಿಯೊರ್ವ ಮೃತಪಟ್ಟಿದ್ದ ಬಳಿಕ ಬುಧವಾರ ರಾತ್ರಿ ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿ ಮನೆ ಕುಸಿದು ಚೆನ್ನಮ್ಮ ರಾಮಪ್ಪ ವಾಲೀಕಾರ (೬೫) ಎಂಬ ವದ್ದೆ ಮೃತಪಟ್ಟಿದ್ದಾರೆ‌. ಮತ್ತೊಂದು ಘಟನೆಯಲ್ಲಿ ಧಾರವಾಡ ತಾಲೂಕಿನ ಮುರಕಟ್ಟಿ ಗ್ರಾಮದ ಬಳಿ ಬೇಡ್ತಿ ಹಳ್ಳಕ್ಕೆ ಸಿಲುಕಿ ವಾಹನ ಚಾಲಕ ಮೃತಪಟ್ಟಿದ್ದು,ಗುರುತು ಪತ್ತೆ ಆಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next