Advertisement

ಚಂಡಮಾರುತ ಎಫೆಕ್ಟ್; ನೆಲಕಚ್ಚಿದ ಕಾಫಿ ಬೆಳೆ; ಮಲೆನಾಡ ರೈತರ ಗೋಳು ಕೇಳುವವರ್ಯಾರು?

11:24 AM Dec 14, 2022 | Team Udayavani |

ಚಿಕ್ಕಮಗಳೂರು: ಕಳೆದು ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಾಫಿನಾಡು ನಲುಗಿ ಹೋಗಿದೆ. ಚಂಡಮಾರುತ ಎಫೆಕ್ಟ್ ನಿಂದ ಕಾಫಿ ಬೆಳೆ ಮಣ್ಣು ಪಾಲಾಗಿದೆ. ಮಲೆನಾಡ ರೈತರು ವರುಣ ದೇವರನಿಗೆ ಹಿಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಡಿಸೆಂಬರ್ ತಿಂಗಳಲ್ಲಿ ಕಾಫಿ ಭತ್ತ ಕೊಯ್ಲಿಗೆ ಬರುವ ಸಮಯದಲ್ಲಿ ಮಳೆ ಬಂದರೆ ರೈತನ ಪರಿಸ್ಥಿತಿ ಊಹಿಸಿಕೊಳ್ಳಲು ಅಸಾಧ್ಯ. ಮಲೆನಾಡಿನಲ್ಲಿ ಒಂದು ವಾರದಿಂದ ಮಳೆ ಬೋರ್ಗರೆಯುತ್ತಿದ್ದು, ರೈತಾಪಿ ವರ್ಗ ಹೈರಣಾಗಿ ಹೋಗಿದ್ದಾರೆ.

ಕಾಫಿ ಹಣ್ಣಾಗಿ ಉದುರಿ ಹೋಗುತ್ತಿದ್ದು, ಕಾಫಿ ಕೊಯ್ಲು ಮಾಡಲಾಗದೆ, ಒಣಗಿಸಲಾಗದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next