Advertisement

ತ್ರಿಪುರ: ಜಡಿಮಳೆ, ದಿಢೀರ್‌ ಪ್ರವಾಹ; 4,500 ಕುಟುಂಬ ನಿರಾಶ್ರಿತ

05:09 PM Aug 12, 2017 | Team Udayavani |

ಅಗರ್ತಲಾ : ನಿರಂತರವಾಗಿ ಸುರಿಯುತ್ತಿರುವ ಜಡಿಮಳೆಯಿಂದಾಗಿ ತ್ರಿಪುರದ ಮೂರು ಜಿಲ್ಲೆಗಳಲ್ಲಿ ದಿಢೀರ್‌ ಪ್ರವಾಹ ಉಂಟಾಗಿದ್ದು 4,500 ಕುಟುಂಬಗಳು ಮನೆ ಮಾರು ಕಳೆದುಕೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

Advertisement

2,000ಕ್ಕೂ ಅಧಿಕ ಕುಟುಂಬಗಳು ವಿವಿಧ ಸರಕಾರಿ ಕಟ್ಟಡಗಳಲ್ಲಿ ಆಶ್ರಯ ಪಡೆದಿವೆ. ರಾಜ್ಯಾದ್ಯಂತದ ಕೆಳಮಟ್ಟದ ಪ್ರದೇಶಗಳೆಲ್ಲ ಜಲಾವೃತವಾಗಿವೆ ಎಂದು ಕಂದಾಯ ಸಚಿವ ಬಾದಲ್‌ ಚೌಧರಿ ಹೇಳಿದ್ದಾರೆ. 

ಸಚಿವ ಚೌಧರಿ ಅವರು ಪಶ್ಚಿಮ ತ್ರಿಪುರ ಜಿಲ್ಲಾಧಿಕಾರಿ ಮಿಲಿಂದ್‌ ರಾಮ್‌ಟೇಕೆ ಅವರೊಂದಿಗೆ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next