Advertisement

ಇಂದಿನಿಂದ ಕೋಲಾರದಲ್ಲಿ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ

11:41 PM Aug 16, 2019 | Team Udayavani |

ಕೋಲಾರ: ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಮತ್ತು ಭಾನುವಾರ, ಎರಡು ದಿನ ರಾಜ್ಯಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಟಿ.ಚನ್ನಯ್ಯ ಮಹಾದ್ವಾರದ ಡಾ.ಬಿ.ಆರ್‌.ಅಂಬೇಡ್ಕರ್‌ ವೇದಿಕೆಯಲ್ಲಿ ಡಾ.ಎಲ್‌.ಹನುಮಂತಯ್ಯ ಸಮ್ಮೇಳನಾಧ್ಯಕ್ಷತೆಯಲ್ಲಿ ರಾಜ್ಯದ ದಲಿತರ ಸ್ಥಿತಿಗಳ ಜತೆ ದಲಿತ ಚಳವಳಿಯ ಚಿಂತನೆಗಳ ಬಗ್ಗೆ ಸವಿಸ್ತಾರ ಚರ್ಚೆಗಳು ನಡೆಯಲಿವೆ.

Advertisement

ವಿವಿಧ ಅತಿಥಿ ಗೃಹಗಳಲ್ಲಿ ಸುಮಾರು 135 ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದು, ದೇವರಾಜ ಅರಸು ಕಾಲೇಜಿನ 12 ಕೊಠಡಿಗಳ ಜೊತೆಗೆ ಪ್ರತಿನಿಧಿಗಳ ಆಧಾರದ ಮೇಲೆ ಇನ್ನಷ್ಟು ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಮ್ಮೇಳನ ನಡೆಯುವ ಸ್ಥಳದ ಮುಂದೆ 20 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ. ಸಮ್ಮೇಳನದ ಪ್ರಮುಖ ವೇದಿಕೆಯ ಹಾಲ್‌ನಲ್ಲಿ 650 ಅಸನಗಳ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next