Advertisement

ಮೆರವಣಿಗೆಯಲ್ಲಿ ಪಟಾಕಿ ಸ್ಪೋಟ: ಇಬ್ಬರು ಬಾಲಕರ ಸಾವು, ಹಲವರಿಗೆ ಗಾಯ

02:51 PM Feb 09, 2020 | keerthan |

ಚಂಡೀಗಡ ( ಪಂಜಾಬ್): ಪಟಾಕಿ ಸ್ಪೋಟವಾಗಿ ಇಬ್ಬರು ಬಾಲಕರು ಮೃತಪಟ್ಟು, ಒಂಬತ್ತಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಂಜಾಬ್ ನ ತರ್ನ್ ತರನ್ ಜಿಲ್ಲೆಯಲ್ಲಿ ನಡೆದಿದೆ.

Advertisement

17 ವರ್ಷದ ಮನ್ ಪ್ರೀತ್ ಸಿಂಗ್ ಮತ್ತು 12 ವರ್ಷದ ಗುರುಪ್ರೀತ್ ಸಿಂಗ್ ಈ ಅವಘಡದಲ್ಲಿ ಮೃತಪಟ್ಟವರು.

ಇಲ್ಲಿನ ನಗರ ಕೀರ್ತನೆ ಎಂಬ ಧಾರ್ಮಿಕ ಮೆರವಣಿಗೆಯ ಸಂದರ್ಭ ಈ ಘಟನೆ ನಡೆದಿದೆ.

ಮೆರವಣಿಗೆಯ ಸಂದರ್ಭ ಪಟಾಕಿ ಸಿಡಿಸಲಾಗುತ್ತಿತ್ತು. ಈ ವೇಳೆ ಅಲ್ಲಿ ಸಮೀಪದಲ್ಲಿ ಟ್ರಾಕ್ಟರ್ ಟ್ರಾಲಿಯಲ್ಲಿ ಮತ್ತಷ್ಟು ಪಟಾಕಿಗಳನ್ನು ಹೊತ್ತೊಯ್ಯಲಾಗುತ್ತಿತ್ತು. ಆ ವೇಳೆಗೆ ಸಿಡಿಯುತ್ತಿದ್ದ ಪಟಾಕಿಯ ಬೆಂಕಿ ಕಿಡಿ ಟ್ರಾಲಿಯಲ್ಲಿನ ಪಟಾಕಿ ಮೇಲೆ ಬಿದ್ದು ಅಲ್ಲಿದ್ದ ಪಟಾಕಿಗಳು ಸ್ಪೋಟಗೊಂಡಿವೆ ಎನ್ನಲಾಗಿದೆ. ಸ್ಪೋಟದ ತೀವ್ರತೆಗೆ ಟ್ರಾಕ್ಟರ್ ಟ್ರಾಲಿ ತುಂಡು ತುಂಡಾಗಿದೆ.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತಲಾ ಐದು ಲಕ್ಷ ಘೋಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next