Advertisement

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

09:26 AM Jan 25, 2021 | Team Udayavani |

ವಿಜಯಪುರ: ತೋಟದಲ್ಲಿದ್ದ ತೊಗರಿ ರಾಶಿಗೆ ಬೆಂಕಿ ಹಚ್ಚಿದ ಅಪರಿಚಿತ ದುಷ್ಕರ್ಮಿಗಳು ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿ ದುಷ್ಕೃತ್ಯ ಎಸಗಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ಜರಗಿದೆ.

Advertisement

ಪಡನೂರ ಗ್ರಾಮದ ಮಲ್ಲು ಅವರಾದಿ ಎಂಬ ರೈತ ತಮ್ಮ ಜಮೀನಿನಲ್ಲಿ ರಾಶಿ ಮಾಡಿಟ್ಟಿದ್ದ ಸುಮಾರು 40 ಕ್ವಿಂಟಾಲ್ ತೊಗರಿಗೆ ಬೆಂಕಿ ಇಟ್ಟಿರುವ ಕಾರಣ ತೊಗರಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಇದನ್ನೂ ಓದಿ:ಮಾನವಕುಲಕ್ಕೆ ಕಂಟಕವಾಗಲಿದೆಯೇ ಶಿಥಿಲ ಅಣೆಕಟ್ಟುಗಳು?

ದುಷ್ಕೃತ್ಯ ಎಸಗಿದ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಬಳಿಕ, ಕೊಳವೆ ಬಾವಿಯ ವಿದ್ಯುತ್ ಸಂಪರ್ಕ ಕಡಿತ ಮಾಡಿ, ಪಂಪಸೆಟ್ ಹೊತ್ತೊಯ್ದಿದ್ದಾರೆ.

Advertisement

ಇದನ್ನೂ ಓದಿ: ಎಂಡೋ ಸಂತ್ರಸ್ತರಿಗೆ ಹಲವು ತಿಂಗಳಿಂದ ಸಿಕ್ಕಿಲ್ಲ ಮಾಸಾಶನ

ಘಟನೆಯಲ್ಲಿ ರೈತ ಅವರಾದಿ ಅವರಿಗೆ ಸುಮಾರು 3 ಲಕ್ಷ ರೂ. ನಷ್ಟವಾಗಿದೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next