Advertisement

ಪದ್ಮಾವತಿ ವಿರುದ್ಧ ಎಫ್ಐಆರ್‌

11:45 AM May 04, 2018 | |

ಬೆಂಗಳೂರು: ಸಾಲ ಮರುಪಾವತಿ ಮಾಡದೇ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಮೇಯರ್‌ ಪದ್ಮಾವತಿ ಸೇರಿ ನಾಲ್ವರ ವಿರುದ್ಧ ರಾಜಾಜಿನಗರ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

Advertisement

ಸಾಲದ ರೂಪದಲ್ಲಿ ಪಡೆ ದಿ ದ್ದ 3.4 ಕೋಟಿ ರೂ. ವಾಪಸ್‌ ನೀಡಿಲ್ಲ ಎಂದು ಸಂಪ ತ್‌ ಕುಮಾರ್‌ ಎಂಬುವವರು ಕೋರ್ಟ್‌ ಮೊರೆ ಹೋಗಿದ್ದು, ಈ ಸಂಬಂಧ ಕೋರ್ಟ್‌ ನಿರ್ದೇಶನದ ಮೇರೆಗೆ  ಐಪಿಸಿ 420 ಸೆಕ್ಷ ನ್‌ ಅಡಿ ಪದ್ಮಾವತಿ ಮತ್ತಿತರರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪದ್ಮಾವತಿ ಅವರೊಂದಿಗೆ ಜಯಪಾಲ್‌, ಗಜಾನನ ಮತ್ತು ಸಂತೋ ಷ್‌ ಎಂಬು ವ ವ ರ ಮೇಲೂ ಎಫ್ಐಆರ್‌ ದಾಖಲಿಸಲಾಗಿದೆ. ಇವರು ಒಂದು ಕಂತಿ ನ ಲ್ಲಿ 1.4 ಕೋಟಿ ರೂ. ಮತ್ತು ಮತ್ತೂಂದು ಕತ್ತಿ ನ ಲ್ಲಿ 2 ಕೋಟಿ  ರೂ. ಸೇರಿ ಒಟ್ಟು 3.4 ಕೋಟಿ ರೂ. ಸಾಲ ಪಡೆ ದು ಕೊಂಡಿ  ದ್ದರು. ಸಾ ಲ ಕ್ಕೆ ಪ್ರತಿ ಯಾ  ಗಿ ರಾಜಾ ಜಿ ನ ಗ ರ‌ 2ನೇ ಬ್ಲಾ ಕ್‌ ನ ಲ್ಲಿ ದ್ದ ಕಟ್ಟ  ಡ ವ ನ್ನು ಸಂ ಪ ತ್‌  ಕು ಮಾ ರ್‌ ಗೆ ಮಾರಾ ಟ ಮಾಡಲು ಸಿದ್ಧವಾಗಿದ್ದರು.

ಈ ಬಗ್ಗೆ ಸೇಲ್‌ ಅಗ್ರಿ ಮೆಂಟ್‌ ಕೂಡ ಆಗಿ ತ್ತು. ಆದ ರೆ, ನಿಗ ದಿ ತ ಸಮ ಯ ಕ್ಕೆ ನೋಂದಣಿ ಮಾಡಿಕೊಟ್ಟಿರಲಿಲ್ಲ.  ಈ ಸಂಬಂಧ ಸಂಪ ತ್‌  ಕು ಮಾ ರ್‌, ಪದ್ಮಾವತಿ ಮತ್ತಿತರರ ವಿರುದ್ಧ  ಸಿಟಿ  ಸಿ  ವಿ ಲ್‌ ಕೋರ್ಟ್‌ ನ ಲ್ಲಿ ದಾವೆ ಹೂಡಿದ್ದರು. ವಿಚಾ ರ ಣೆ ನಡೆ ಸಿ ದ ಕೋರ್ಟ್‌, ಆರೋ ಪಿ ಗ ಳ ವಿರು ದ್ಧ ಪ್ರಕ ರ  ಣ ದಾಖ ಲಿ  ಸು ವಂತೆ ಸೂಚಿ ಸಿ ತ್ತು.  ಹೀ ಗಾ ಗಿ ಪ್ರಕ ರ ಣ ದಾಖ ಲಿ ಸ ಲಾ ಗಿ ದೆ ಎಂದು ಪೊಲೀ ಸ ರು ತಿಳಿ  ಸಿ ದ್ದಾ ರೆ.

Advertisement

Udayavani is now on Telegram. Click here to join our channel and stay updated with the latest news.

Next