Advertisement

Shame:ಬೆಳ್ಳಂಬೆಳಗ್ಗೆ ಯುವತಿಯ ತುಟಿ ಕಚ್ಚಿ ಮುತ್ತಿಟ್ಟು ಕಾಮುಕ ಪರಾರಿ

04:54 PM Jan 06, 2017 | Team Udayavani |

ಬೆಂಗಳೂರು : ಹೊಸವರ್ಷಾಚರಣೆ ವೇಳೆ ನಗರದಲ್ಲಿ ಯುವತಿಯರಿಗೆ ಕಾಮಾಂಧರು ನೀಡಿದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ,ಕಮ್ಮನಹಳ್ಳಿಯಲ್ಲಿ ನಡೆದ ದೌರ್ಜನ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇಂದು ಶುಕ್ರವಾರ ಮತ್ತೆ ಕಾಮುಕರು ಅಟ್ಟಹಾಸ ಮೆರೆದಿದ್ದು, ಬೆಳ್ಳಂಬೆಳಗ್ಗೆ  ನಗರದ ಕೆ.ಜಿ.ಹಳ್ಳಿಯಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಹೇಯ ಘಟನೆ ವರದಿಯಾಗಿದೆ. 

Advertisement

ಆತಂಕಕಾರಿ ವಿಚಾರವೆಂದರೆ ಬೆಳಗ್ಗೆ  6.30 ರ ವೇಳೆಗೆ ಹೇಯ ಘಟನೆ ನಡೆದಿದ್ದು ಬಸ್‌ ನಿಲ್ದಾಣಕ್ಕೆ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿದ ಕಾಮುಕ ಆಕೆಯನ್ನು ಅಡ್ಡಗಟ್ಟಿ ತುಟಿಗೆ ಮುತ್ತಿಟ್ಟು ನಾಲಿಗೆ ಕಚ್ಚಿ ಪರಾರಿಯಾಗಿದ್ದಾನೆ. 

ಕಾಮುಕ ಎರಗುತ್ತಿದ್ದಂತೆ ಯುವತಿ ಬೊಬ್ಬಿಟ್ಟಿದ್ದು, ಮನೆಯೊಂದರಲ್ಲಿದ್ದ ನಾಯಿ ಜೋರಾಗಿ ಬೊಗಳಿದೆ. ಕೂಡಲೇ ಸಾರ್ವಜನಿಕರು ಬರುವಷ್ಟರಲ್ಲಿ ಕಾಮುಕ ಪರಾರಿಯಾಗಿದ್ದಾನೆ. ಘಟನೆಯ ದೃಶ್ಯಾವಳಿ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೆ.ಜಿ.ಹಳ್ಳಿ ಪೊಲೀಸರು ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು ,ಕಾಮುಕನಾಗಿ ಶೋಧ ಆರಂಭಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next