Advertisement

ಕೋವಿಡ್‌ ಸಂತ್ರಸ್ತರಿಗೆ ಟಿಟಿ ಆಟಗಾರರಿಂದ ಆರ್ಥಿಕ ನೆರವು

10:52 PM Jun 27, 2020 | Sriram |

ಹೊಸದಿಲ್ಲಿ: ಕೋವಿಡ್‌-19ದಿಂದ ಸಂಕಟಕ್ಕೆ ಸಿಲುಕಿದ ಟೇಬಲ್‌ ಟೆನಿಸ್‌ ಪರಿವಾರಕ್ಕೆ ಭಾರತದ ಮೂವರು ಟಿಟಿ ಆಟಗಾರರು ಆರ್ಥಿಕ ನೆರವಿಗೆ ಮುಂದಾಗಿದ್ದಾರೆ. ಇವರೆಂದರೆ ಶರತ್‌ ಕಮಲ್‌, ಜಿ. ಸಥಿಯನ್‌ ಮತ್ತು ನೇಹಾ ಅಗರ್ವಾಲ್‌.

Advertisement

ಈ ಮೂವರು ಸೇರಿಕೊಂಡು ನಾಲ್ಕೇ ದಿನಗಳಲ್ಲಿ 7 ಲಕ್ಷ ರೂ. ಒಟ್ಟುಗೂಡಿಸಿದ್ದಾರೆ. ಇದನ್ನು 10 ಲಕ್ಷ ರೂ.ಗೆವಿಸ್ತರಿಸಿ ಕನಿಷ್ಠ 100 ಮಂದಿಗೆ ನೆರವು ಒದಗಿಸುವುದು ಇವರ ಯೋಜನೆಯಾಗಿದೆ. ತೀವ್ರ ಸಂಕಟದಲ್ಲಿರುವ ಟಿಟಿ ಆಟಗಾರರಿಗೆ, ತರಬೇತುದಾರರಿಗೆ, ಅಂಪಾಯರ್‌ ಮೊದಲಾದವರಿಗೆಲ್ಲ ಈ ನೆರವು ಲಭಿಸಲಿದೆ.

“ಇಂಥದೊಂದು ಯೋಜನೆ ಹೊಳೆದದ್ದು ಸಥಿಯನ್‌ ಅವರಿಗೆ. ಕೋವಿಡ್‌ ದಿಂದಾಗಿ ಕೆಲಸವಿಲ್ಲದೆ ಕುಳಿತಿರುವ ಟಿಟಿ ತರಬೇತುದಾರರಿಗೆ ಹಾಗೂ ಇತರರಿಗೆ ಈ ಸಮಯದಲ್ಲಿ ಕನಿಷ್ಠ ಇಷ್ಟಾದರೂ ನೆರವು ನೀಡೋಣ ಎಂದು ತೀರ್ಮಾನಿಸಿದೆವು…’ ಎಂಬುದಾಗಿ ಶರತ್‌ ಕಮಲ್‌ ಹೇಳಿದರು.

ಈ ನೆರವು ಯಾರಿಗೆ ತಲುಪಬೇಕು ಎಂಬುದನ್ನು ಸೌಮ್ಯದೀಪ್‌ ರಾಯ್‌ ಮತ್ತು ಕಮಲೇಶ್‌ ಮೆಹ್ತಾ ಸೇರಿಕೊಂಡು ನಿರ್ಧರಿಸಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next