Advertisement

ವಿಮಲಾಬಾಯಿಗೆ ಅಂತಿಮ ವಿದಾಯ

02:31 PM Jul 24, 2018 | |

ನಾಲತವಾಡ: ಅನಾರೋಗ್ಯದಿಂದ ರವಿವಾರ ವಿಜಯಪುರದಲ್ಲಿ ನಿಧನರಾಗಿದ್ದ ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರ ಅಂತ್ಯಕ್ರಿಯೆ ಸೋಮವಾರ ಪಟ್ಟಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

Advertisement

ಅಂತ್ಯಕ್ರಿಯೆಗೂ ಮುನ್ನ ಸಚಿವರು, ಶಾಸಕರು, ಅಪಾರ ಅಭಿಮಾನಿಗಳು ದೇಶಮುಖರ ಅಂತಿಮ ದರ್ಶನ ಪಡೆದರು. ಜನಸಮೂಹದ ಮಧ್ಯೆ ಪಾರ್ಥೀವ ಶರೀರದ ಮೆರವಣಿಗೆ ನಡೆಸಿ ವೀರೇಶ್ವರ ವಿದ್ಯಾ ಸಂಸ್ಥೆ ಆವರಣದಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಪೂರೈಸಿ ಅಂತ್ಯಸಂಸ್ಕಾರ ಮಾಡಲಾಯಿತು. 

ಸಚಿವರುಗಳಾದ ಶಿವಾನಂದ ಪಾಟೀಲ, ಎಂ.ಸಿ. ಮನಗೂಳಿ, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಮಾಜಿ ಸಚಿವ ಸಿ.ಎಸ್‌. ನಾಡಗೌಡ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಇಳಕ್ಲದ ಗುರುಮಹಾಂತ ಮಹಾಸ್ವಾಮಿಗಳು, ತಹಶೀಲ್ದಾರ್‌ ಎಂ.ಎ.ಎಸ್‌. ಬಾಗವಾನ, ಡಿವೈಎಸ್ಪಿ ಎಸ್‌.ಮಹೇಶ್ವರ, ಎಂ.ಎಸ್‌. ಪಾಟೀಲ ಸೇರಿದಂತೆ ಅಪಾರ ಸಂಖ್ಯೆ ಅಭಿಮಾನಿಗಳು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. 

ನಂದಿನಿ ದೇಶಮುಖ, ಗುರುಪ್ರಸಾದ ದೇಶಮುಖ, ಶಂಕರರಾವ್‌ ದೇಶಮುಖ, ಲೊಹಿತ್‌ ದೇಶಮುಖ, ಅಮರ್‌ ದೇಶಮುಖ, ಮುನ್ನಾಧಣಿ ನಾಡಗೌಡ, ನಾನಾಸಾಹೇಬ್‌ ದೇಶಮುಖ, ಪಪಂ ಅಧ್ಯಕ್ಷ ಪೃಥ್ವಿರಾಜ್‌ ನಾಡಗೌಡ, ಸೋಮಶೇಖರ ನಾಡಗೌಡ, ರಾಹುಲ್‌ ನಾಡಗೌಡ, ಚಿನ್ನು ನಾಡಗೌಡ, ಗದಗ ಕಪ್ಪದಗುಡ್ಡದ ಶಿವಕುಮಾರ ಮಹಾಸ್ವಾಮಿಗಳು, ಸುರೇಶ ಹಿರೇಮಠ, ಸೋಮಶೇಖರ ನಾಡಗೌಡ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next