Advertisement

ಹುಟ್ಟೂರು ಮಂಡ್ಯಕ್ಕೆ ಐಸಿಯು ಘಟಕ ಕೊಡುಗೆ ನೀಡಿದ ನಿರ್ಮಾಪಕ ವಿಜಯ್ ಕಿರಂಗದೂರು

09:58 PM Jun 17, 2021 | Team Udayavani |

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಂಗದೂರು ಅವರು ಕೋವಿಡ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ತಮ್ಮ ಹುಟ್ಟೂರು ಮಂಡ್ಯಕ್ಕೆ ಅಳಿಲು ಸೇವೆ ಮಾಡಿದ್ದಾರೆ.

Advertisement

ಕನ್ನಡ ಚಿತ್ರರಂಗದ ಬಿಗ್ ಸಿನಿಮಾಗಳ ನಿರ್ಮಾಪಕ ವಿಜಯ್ ಕಿರಂಗದೂರು ಅವರು ತಮ್ಮ ಹುಟ್ಟೂರು ಮಂಡ್ಯಕ್ಕೆ ನೆರವಿನ ಹಸ್ತ ಚಾಚಿದ್ದಾರೆ. 50 ಬೆಡ್ ಗಳನ್ನು ಹೊಂದಿರುವ ಒಂದು ಸುಸಜ್ಜಿತ ಐಸಿಯು ಘಟಕವನ್ನು ನಿರ್ಮಿಸಿದ್ದಾರೆ. ಇಂದು ( ಜೂನ್ 16) ಎಂಐಎಂಎಸ್ ಸಂಸ್ಥೆಗೆ ಈ ಘಟಕವನ್ನು ಹಸ್ತಾಂತರಿಸಲಾಯಿತು. ಈ ವಿಷಯವನ್ನು ವಿಜಯ್ ಅವರು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ವಿಜಯ್ ಕಿರಂಗದೂರು ಅವರು, ಕರ್ನಾಟಕ ಚಲನಚಿತ್ರ ಒಕ್ಕೂಟದ ಕಾರ್ಮಿಕರಿಗೆ ನೆರವಾಗಿದ್ದರು. 32 ಲಕ್ಷ. ರೂ. ದೇಣಿಗೆ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಇದೀಗ ಮಂಡ್ಯಕ್ಕೆ ಐಸಿಯು ಘಟಕ ಕೊಡುಗೆಯಾಗಿ ನೀಡಿದ್ದಾರೆ.

ಇನ್ನು ವಿಜಯ್ ಕಿರಂಗದೂರು ಅವರು ಸ್ಯಾಂಡವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಹಣ ಹೂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಕೆಜಿಎಫ್ ಹಾಗೂ ಯುವರತ್ನ ನಂತಹ ಸಾಕಷ್ಟು ಹಿಟ್ ಚಿತ್ರಗಳನ್ನು ಪ್ರೊಡ್ಯೂಸ್ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ತಮ್ಮದೆಯಾದ ಕೊಡುಗೆ ನೀಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next