Advertisement

ಪರ-ವಿರೋಧ; ವೀರಶೈವ, ಲಿಂಗಾಯತ ಬಣದ ನಡುವೆ ಮಾರಾಮಾರಿ

06:09 PM Mar 19, 2018 | Sharanya Alva |

ಕಲಬುರಗಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ ಬೆನ್ನಲ್ಲೇ ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿಸಿ ಎರಡೂ ಪಂಗಡಗಳ ನಡುವೆ ಮಾರಾಮಾರಿ ನಡೆದಿದೆ.

Advertisement

ಕಲಬುರಗಿಯ ವಲ್ಲಭಭಾಯ್ ಪಟೇಲ್ ಸರ್ಕಲ್ ಬಳಿ ವೀರಶೈವ, ಲಿಂಗಾಯತ ಧರ್ಮದವರು ಪರಸ್ಪರ ಮಾರಾಮಾರಿ ನಡೆದಿದೆ. ಲಿಂಗಾಯತ ಮುಖಂಡರು ಎಂಎಸ್ ಪಾಟೀಲ್ ಅವರನ್ನು ಥಳಿಸಿದ್ದಾರೆ.

ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದ್ದನ್ನು ವಿರೋಧಿಸಿ ವೀರಶೈವ ಬಣದವರು ಚಪ್ಪಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವೆಡೆ ವಿಜಯೋತ್ಸವ:

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಿಸಿ ಬಸವಾಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next