Advertisement

Bajpe ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಬಂಧನ

11:09 PM Aug 21, 2023 | Team Udayavani |

ಮಂಗಳೂರು: ಗುರುಪುರ ಕೈಕಂಬ ಬಸ್‌ ನಿಲ್ದಾಣದಲ್ಲಿ ವೈಯಕ್ತಿಕ ವಿಚಾರದಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದಾಡುತ್ತಿದ್ದ ಇಬ್ಬರನ್ನು ಬಜಪೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಬಂಟ್ವಾಳ ತಾಲೂಕು ತೆಂಕ ಬೆಳ್ಳೂರು ಗ್ರಾಮದ ಶಿವಪ್ರಸಾದ್‌ (39) ಮತ್ತು ಮಂಗಳೂರು ಶಕ್ತಿನಗರ ಕಾರ್ಮಿಕ ಕಾಲನಿಯ ಷಡ್ರಕ್‌ ಇಮ್ಯಾನುವಲ್‌ ಯಾನೇ ಮನು (39) ಬಂಧಿತರು.

ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಇಬ್ಬರ ಗಲಾಟೆ ಬಗ್ಗೆ ಮಾಹಿತಿ ತಿಳಿದ ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿದ್ದ ಬಜಪೆ ಪೊಲೀಸ್‌ ಠಾಣಾ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಜಗಳವನ್ನು ಬಿಡಿಸಿದ್ದಾರೆ.

ಪ್ರಕರಣ ದಾಖಲು
ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು, ಪರಸ್ಪರ ಹೊಡೆದಾಡಿಕೊಂಡು ಸಾರ್ವಜ ನಿಕರ ನೆಮ್ಮದಿ ಭಂಗವುಂಟು ಮಾಡಿದ ಆರೋಪಿಗಳ ವಿರುದ್ಧ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next