Advertisement

ರಂಗೇರಿದ ಉತ್ಸವ: ಕುಣಿದು ಕುಪ್ಪಳಿಸಿದ ಜನಸ್ತೋಮ

07:16 PM Feb 06, 2018 | Team Udayavani |

ಕುಮಟಾ: ಬಿಗ್‌ಬಾಸ್‌ ವಿಜೇತರಾದ ನಂತರ ನಡೆದ ರ್ಯಾಪರ್‌ ಚಂದನ್‌ ಶೆಟ್ಟಿಯವರ ಮೊದಲ ಸಾರ್ವಜನಿಕ ಕಾರ್ಯಕ್ರಮ ಕುಮಟಾ ಉತ್ಸವದ ನಾಲ್ಕನೇ ದಿನ ಮಣಕಿ ಮೈದಾನದಲ್ಲಿ ಭಾರೀ ಜನಸ್ತೋಮದ ನಡುವೆ ಇತಿಹಾಸವನ್ನೇ ಸೃಷ್ಟಿಸಿತು. 

Advertisement

ಮೊದಲೇ ಚಂದನ ಶೆಟ್ಟಿ ಕಾರ್ಯಕ್ರಮ ನಿಗದಿಯಾಗದಿದ್ದರೂ, ನಿಗದಿತ ಕಾರ್ಯಕ್ರಮ ಪಟ್ಟಿಯಂತೆ ಅಂತಾರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಡ್ಯಾನ್ಸ್‌ ಮಸ್ತಿ-2018 ಹಾಗೂ ಇತರ ಕಾರ್ಯಕ್ರಮ ಜೊತೆಯಲ್ಲಿ ಬಿಗ್‌ಬಾಸ್‌ ವಿಜೇತ ಚಂದನ್‌ ಶೆಟ್ಟಿಯವರ ಪ್ರದರ್ಶನ ಜೋಡಿಸುವಲ್ಲಿ ಕೊನೆಯ
ಕ್ಷಣದಲ್ಲಿ ಕುಮಟಾ ಉತ್ಸವ ಸಮಿತಿ ಯಶಸ್ವಿಯಾಗಿದ್ದು ವ್ಯರ್ಥವಾಗಲಿಲ್ಲ. ಕುಮಟಾ ಉತ್ಸವಕ್ಕೆ ಚಂದನ ಶೆಟ್ಟಿ ಬರುತ್ತಾರೆಂದು ಎರಡು ದಿನ ಮುಂಚೆ ಪ್ರಚಾರ ಪಡೆಯುತ್ತಿದ್ದಂತೆಯೇ ಉತ್ಸವದ ಕಾರ್ಯಕ್ರಮಗಳಿಗೆ ಹೊಸರಂಗು ಬಂದಿತ್ತು. ಡ್ಯಾನ್ಸ್‌ ಮಸ್ತಿ ಕಾರ್ಯಕ್ರಮಗಳ ತರಾವರಿ ನೃತ್ಯ ಪ್ರದರ್ಶನದ ನಡುವೆ ರ್ಯಾಪರ್‌ ಚಂದನ್‌ ಶೆಟ್ಟಿ , ಚಿನ್ನಾರಿ ಮುತ್ತ ಖ್ಯಾತಿಯ ನಟ ವಿಜಯ ರಾಘವೇಂದ್ರ, ಮುಗುಳುನಗೆ ಚಲನಚಿತ್ರದ ನಟಿ ನಿಖೀತಾ, ತುಳು ನಟ ನಾಗರಾಜ ಹಂಬರ್‌, ಶ್ರೇಯಾ ಅಂಚನ್‌ ಮುಂತಾದವರ ಜೊತೆ ಹಾಡಿ ಕುಣಿದರು.

ರಾತ್ರಿಯಾಗುತ್ತಿದ್ದಂತೆಯೇ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ ಮಣಕಿ ಮೈದಾನದಲ್ಲಿ ಎಲ್ಲಿ ನೋಡಿದರಲ್ಲಿ ಜನವೋಜನ ಎಂಬಂತಾಗಿತ್ತು. ಈ ನಡುವೆ ನೆಚ್ಚಿನ ನಾಯಕ, ನಾಯಕಿಯರ ಹಾಡು ಕುಣಿತಕ್ಕೆ ದೊಡ್ಡ ಪ್ರಮಾಣದಲ್ಲಿ ಸೇರಿದ್ದ ಯುವ ಸಮೂಹವೂ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ರೋಬೋ ಗಣೇಶರವರ ವಿಶೇಷ ನೃತ್ಯವೂ ನೋಡುಗರನ್ನು ಆಕರ್ಷಿಸಿತು. ಉತ್ಸವ ಸಮಿತಿ ಅಧ್ಯಕ್ಷ ರವಿಕುಮಾರ ಶೆಟ್ಟಿ ಹಾಗೂ ಬಳಗದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಆರಕ್ಷಕರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next