Advertisement

ಪ್ರಧಾನಿ ಮೋದಿ “ಸಂತ”; ದೆಹಲಿ ಆಪ್ ಶಾಸಕ ವೇದ್ ಬಿಜೆಪಿಗೆ ಸೇರ್ಪಡೆ

03:03 PM Mar 27, 2017 | Team Udayavani |

ನವದೆಹಲಿ:ಜಿದ್ದಾಜಿದ್ದಿಯ ಅಖಾಡವಾಗಲಿರುವ ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ)ಯ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವ ನಡುವೆಯೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಶಾಸಕ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿರುವ ಬೆಳವಣಿಗೆ ಸೋಮವಾರ ನಡೆದಿದೆ.

Advertisement

ದೆಹಲಿ ಬಾವೌನಾ ಕ್ಷೇತ್ರದ ಶಾಸಕ ವೇದ್ ಪ್ರಕಾಶ್ ಶಾಸಕ ಸ್ಥಾನ ಸೇರಿದಂತೆ ಆಪ್ ನ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಆಪ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವುದಕ್ಕೆ ಏನು ಕಾರಣ ಎಂಬುದನ್ನು ಹೊರಹಾಕಿರುವ ವೇದ್ ಪ್ರಕಾಶ್, ಸಂತ ನರೇಂದ್ರ ಮೋದಿ ಅವರ ನೇತೃತ್ವದಡಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next