Advertisement

ಯಾಂತ್ರೀಕೃತ ನಾಡದೋಣಿ ನಿರ್ಮಾಣಕ್ಕೆ ಸಾಧ್ಯತಾ ಪತ್ರ ವಿತರಣೆ

04:14 PM Mar 17, 2017 | |

ಬೈಂದೂರು: ಮೀನುಗಾರಿಕಾ ಇಲಾಖೆಯಿಂದ ನೂತನ ಬೋಟ್‌ ನಿರ್ಮಾಣಕ್ಕೆ ಸರಕಾರದಿಂದ ಬಿಡುಗಡೆಯಾದ ಸಾಧ್ಯತಾ ಪತ್ರವನ್ನು ಬೈಂದೂರು ಶಾಸಕ ಕಚೇರಿಯಲ್ಲಿ ಆಯ್ದ ಫಲಾನುಭವಿಗಳಿಗೆ ವಿತರಿಸಲಾಯಿತು. ಬೈಂದೂರು ಶಾಸಕ, ಕೆ.ಎಸ್‌.ಆರ್‌. ಟಿ.ಸಿ. ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ವಿತರಿಸಿದರು.

Advertisement

ಈ ಸಂದ‌ರ್ಭದಲ್ಲಿ ಮಾತನಾಡಿ ಮೀನುಗಾರರಿಗೆ ಅನುಕೂಲವಾಗುವ ನೆಲೆಯಲ್ಲಿ ಸಾಧ್ಯತಾ ಪತ್ರವನ್ನು ವಿತರಿಸಲಾಗಿದೆ. ರಾಜ್ಯ ಸರಕಾರ ಮತ್ಸಾÂಶ್ರಯ ಯೋಜನೆಯಡಿ ಮೀನುಗಾರರ ಮನೆ ನಿರ್ಮಾಣಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ 90 ಮನೆಗಳಿಗೆ ಅನುದಾನ ನೀಡಿದೆ. ಬೈಂದೂರು ಕ್ಷೇತ್ರದಲ್ಲಿ 240 ಮೀನುಗಾರಿಕಾ ಮನೆಗಳನ್ನು ನೀಡಲಾಗಿದೆ ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಕೆ.ಡಿ.ಪಿ ಸದಸ್ಯ ಎಸ್‌. ರಾಜು ಪೂಜಾರಿ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮದನ್‌ ಕುಮಾರ್‌, ಕಾರ್ಯದರ್ಶಿ ನಾಗರಾಜ ಗಾಣಿಗ ಬೈಂದೂರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next