Advertisement

ಭೀಕರ ಅಪಘಾತ: ಏಳು ಸಾವು

07:11 AM Jun 03, 2019 | Lakshmi GovindaRaj |

ಬೆಳಗಾವಿ: ವೇಗವಾಗಿ ಹೋಗುತ್ತಿದ್ದ ಕಾರಿನ ಟೈರ್‌ ಸ್ಫೋಟಗೊಂಡು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಬೆಳಗಾವಿ ಹೊರವಲಯದ ಶ್ರೀನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದೆ.

Advertisement

ಮೃತಪಟ್ಟವರನ್ನು ನಂದು ಪವಾರ (28), ಅಮೋಲ್‌ ನಾವಿ (26), ಸುರೇಶ ಕಾನೇರಿ, (29), ಅಮೋಲ ಚೌರಿ, (26), ಮಹೇಶ ಚೌರಿ (28), ರವೀಂದ್ರ (28)ಗೋಪಿನಾಥ (30) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಹಾರಾಷ್ಟ್ರದ ಔರಂಗಾಬಾದ್‌ ದೇವಗಿರಿ ನಿವಾಸಿಗಳು ಎಂದು ತಿಳಿದು ಬಂದಿದೆ.

ಅಪಘಾತ ರಭಸಕ್ಕೆ ಕಾರು ಸಂಪುರ್ಣ ನಜ್ಜುಗುಜ್ಜಾಗಿದೆ. ಕಾರಿನ ಟೈರ್‌ ಸ್ಫೋಟಗೊಂಡ ನಂತರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಲ್ಲದೆ ಬೆಳಗಾವಿ ಕಡೆಯಿಂದ ಬರುತ್ತಿದ್ದ ಲಾರಿಗೆ ಅಪ್ಪಳಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾನುವಾರ ರಜೆ ಇರುವ ಹಿನ್ನೆಲೆಯಲ್ಲಿ ಐವರು ಸ್ನೇಹಿತರು ಕೊಲ್ಲಾಪುರದಿಂದ ಗೋವಾ ಪ್ರವಾಸಕ್ಕೆ ಹೊರಟಿದ್ದರು. ಅಪಘಾತಕ್ಕೀಡಾದ ಕಾರು ಬೆಳಗಾವಿ ಹೊರವಲಯದ ಶ್ರೀನಗರ ಬಳಿ ಬಂದಾಗ ಅತೀ ವೇಗದಲ್ಲಿದ್ದ ಕಾರಿನ ಟೈರ್‌ ಒಮ್ಮೆಲೇ ಸ್ಫೋಟಗೊಂಡು ಲಾರಿಗೆ ವೇಗವಾಗಿ ಅಪ್ಪಳಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಮಾಳಮಾರುತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next