Advertisement

ಫಾರೂಕ್‌ ಅಬ್ದುಲ್ಲಾ ಹೇಳಿಕೆ ಪ್ರಮುಖರ ಖಂಡನೆ

03:50 AM Feb 26, 2017 | |

ಶ್ರೀನಗರ: ಉಗ್ರ ಕೃತ್ಯಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಜಮ್ಮು ಕಾಶ್ಮೀರದ ಹೊಸ ಪೀಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದೆ. ಯಾರೂ ಸಾವನ್ನು ಬಯಸುವುದಿಲ್ಲ. ಎಲ್ಲರೂ ಜೀವ ಉಳಿಸಿಕೊಳ್ಳುವುದನ್ನೇ ಬಯಸುತ್ತಾರೆ ಎಂಬ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ. ಈ ಬಗ್ಗೆ ದೇಶಾದ್ಯಂತ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಫಾರೂಕ್‌ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕ ಚಿದಂಬರಂ ಹಾಗೂ ಜೆಡಿಯು ನಾಯಕ ಪವನ್‌ ವರ್ಮ ಸಮರ್ಥಿಸಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದ ಹೊಸ ಪೀಳಿಗೆಯ ನೈಜ ಮನಸ್ಥಿತಿಯನ್ನು ಅಬ್ದುಲ್ಲಾ ಸೂಕ್ಷ್ಮವಾಗಿ ಬಿಚ್ಚಿ ಟ್ಟಿದ್ದಾರೆ ಎಂದಿದ್ದಾರೆ. ಬಿಜೆಪಿ-ಪಿಡಿಪಿ ಮೈತ್ರಿಯ ಕುರಿತಾಗಿ ಫಾರೂಕ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಫಾರೂಕ್‌ ಒಬ್ಬ ಅವಕಾಶವಾದಿ ಎಂದಿದ್ದಾರೆ. ಪಿಎಂಒದಲ್ಲಿ ಸಹಾಯಕ ಸಚಿವರಾಗಿರುವ ಡಾ.ಜಿತೇಂದ್ರ ಸಿಂಗ್‌ ಮಾತನಾಡಿ ಅಧಿಕಾರದಲ್ಲಿ ಉಳಿಯಲು ಕಾಂಗ್ರೆಸ್‌ ಈಶಾನ್ಯ ರಾಜ್ಯಗಳಲ್ಲಿ ಮತ್ತು ಕಾಶ್ಮೀರದಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next