Advertisement

ಬಿತ್ತನೆ ಬೀಜಕ್ಕಾಗಿ ರೈತರ ಪರದಾಟ

08:18 AM Jun 06, 2020 | Suhan S |

ಅಣ್ಣಿಗೇರಿ: ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಬಿತ್ತನೆ ಬೀಜಕ್ಕಾಗಿ ರೈತರು ಪರದಾಡುತ್ತಿದ್ದಾರೆ. ಹಳ್ಳಿಗಳಿಂದ ನಿತ್ಯವೂ ರೈತರು ಅಲೆದಾಡುವ ಸ್ಥಿತಿ ಉಂಟಾಗಿದೆ.

Advertisement

ಬಸ್‌ಗಳ ಸೌಲಭ್ಯ ಇಲ್ಲ, ಯಾವುದೋ ಖಾಸಗಿ ವಾಹನಕ್ಕೆ ಬಂದರೂ ಸರಿಯಾದ ಸಮಯಕ್ಕೆ ಹೆಸರು ಬೀಜ ದೊರೆಯುತ್ತಿಲ್ಲ ಎಂದು ರೈತರು ಸರಕಾರ ಮತ್ತು ಆಡಳಿತ ವರ್ಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಕೇಂದ್ರದಲ್ಲಿ ಈಗಾಗಲೇ 155 ಕ್ವಿಂಟಲ್‌ ಬೀಜ ವಿತರಣೆ ಮಾಡಲಾಗಿದ್ದು, ಇನ್ನೂ 200 ಕ್ವಿಂಟಲ್‌ ಬೇಡಿಕೆಯಿದೆ. ಕಳೆದ ವರ್ಷ ಕೇವಲ 40 ಕ್ವಿಂಟಲ್‌ ಹೆಸರು ಬಿತ್ತನೆ ಬೀಜ ವಿತರಣೆಯಾಗಿದೆ.

ಕಳೆದ 10 ವರ್ಷಗಳಲ್ಲಿ 150 ಕ್ವಿಂಟಲ್‌ಗಿಂತ ಹೆಚ್ಚಿಗೆ ಹೆಸರು ಬೀಜ ವಿತರಣೆಯನ್ನು ಮಾಡಿಲ್ಲ. ಆದರೆ ಈ ವರ್ಷ 350 ಕ್ವಿಂಟಲ್‌ ಗೂ ಹೆಚ್ಚು ಬೇಕಾಗುತ್ತದೆ ಎಂದು ಕೃಷಿ ಸಹಾಯಕ ಅಧಿಕಾರಿ ಮೈತ್ರಿಯವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next