Advertisement

ಫೈನಾನ್ಸ್‌ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ

09:04 AM Jul 15, 2020 | Suhan S |

ಹಾಸನ: ರೈತನ ಟ್ರ್ಯಾಕ್ಟರ್‌ ಜಪ್ತಿ ಮಾಡಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಎಲ್‌ ಅಂಡ್‌ ಟಿ ಫೈನಾನ್ಸ್‌ ಕಚೇರಿ ಬಳಿ ಧರಣಿ ನಡೆಸಿದರು.

Advertisement

ನಗರದ ಹೊಸ ಬಸ್‌ ನಿಲ್ದಾಣ ಎದುರು ಹೌಸಿಂಗ್‌ ಬೋರ್ಡ್‌ನಲ್ಲಿರುವ ಎಲ್‌ ಅಂಡ್‌ ಟಿ ಫೈನಾನ್ಸ್‌ಗೆ ಬೀಗ ಹಾಕಲು ಮುಂದಾದ ರೈತ ಸಂಘದ ಕಾರ್ಯಕರ್ತರು, ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ ಅದ್ದಿಹಳ್ಳಿ ಗ್ರಾಮದ ಎಚ್‌.ಆರ್‌. ದೀಪಕ್‌ ಅವರು ಸ್ವರಾಜ್‌ ಕಂಪನಿಯ 7.50 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್‌ ಖರೀದಿಸಲು ಎಲ್‌ ಅಂಡ್‌ ಟಿ ಫೈನಾನ್ಸಿನಿಂದ 5.10 ಲಕ್ಷ ರೂ. ಸಾಲ ಪಡೆದಿದ್ದರು. ಕೋವಿಡ್ ಪರಿಣಾಮ ಲಾಕ್‌ ಡೌನಿಂದಾಗಿ ನಿಗದಿತ ಸಮಯಕ್ಕೆ ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಟ್ರ್ಯಾಕ್ಟರ್‌ ಜಪ್ತಿ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೀಪಕ್‌ ಅವರಿಗೆ ಟ್ರ್ಯಾಕ್ಟರ್‌ ವಾಪಸ್‌ ನೀಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ದೀಪಕ್‌ಗೆ ಟ್ರ್ಯಾಕ್ಟರ್‌ ವಾಪಸ್‌ ನೀಡುವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು. ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಮಹಬೂಬ್‌ ಪಾಷಾ, ಲತಾ, ಮಂಜಣ್ಣ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next