Advertisement

Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ

05:01 PM Sep 16, 2024 | Team Udayavani |

ಕುಳಗೇರಿ ಕ್ರಾಸ್: ರೈತರು ತಮ್ಮ ಜಮೀನಿನಲ್ಲಿ ಬೆಳೆದ ಉತ್ತಮ ಬೆಳೆಗಳಿಗೆ ಯಾರದೂ ದೃಷ್ಟಿ ಬಿಳಬಾರದೆಂದು ಬೆದರು ಗೊಂಬೆ ತಯಾರಿಸಿ ನಿಲ್ಲಿಸುತ್ತಾರೆ. ಮತ್ತೆ ಏನೆಲ್ಲ ಕಸರತ್ತು ನಡೆಸಿ ತಮ್ಮ ಬೆಳೆಗಳನ್ನ ರಕ್ಷಿಸುವ ಕೆಲಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ಉತ್ತಮ ಬೆಳೆಗಳು ಒಣಗುತ್ತಿರುವುದನ್ನ(ಸಿಡಿರೋಗ) ಗಮನಿಸಿ ಮಮಟಗೇರಿ ರೈತನೊಬ್ಬ ತನ್ನ ಬೆಳೆಗೆ ಜನರ ದೃಷ್ಟಿ ಬಿಳಬಾರದೆಂದು ಸಿನಿ ತಾರೆಯರ ಭಾವಚಿತ್ರಗಳ ಕಟೌಟ್ ನಿಲ್ಲಿಸಿದ್ದಾರೆ.

Advertisement

ಮಮಟಗೇರಿ ಗ್ರಾಮದ ರೈತ ಮಹಾಂತೇಶ ತಿಮ್ಮನಾಯ್ಕರ್ ತಮ್ಮ ಎರಡು ಎಕರೆ ಜಮೀನಿನಲ್ಲಿ ಬದನೆಕಾಯಿ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳನ್ನ ಬೆಳೆದಿದ್ದಾರೆ.

ಉತ್ತಮ ಬೆಳೆಗೆ ಸಿಡಿರೋಗ ಬಂದು ನಾಟಿ ಮಾಡಿದ ಗಿಡಗಳು ಒಂದೊಂದಾಗಿ ಒಣಗುತ್ತಿದ್ದವಂತೆ. ತಮ್ಮ ಬೆಳೆಗೆ ಜನರ ದೃಷ್ಟಿ ಬಿಳ್ಳುತ್ತಿದೆ ಎಂದರಿತ ರೈತ ಮಹಾಂತೇಶ ಬೆಳೆಗಳ ಮಧ್ಯೆ ನಟಿಯರ ಫ್ಲೆಕ್ಸ್ ಪ್ರಯೋಗಿಸಿದ್ದಾರಂತೆ.

ಕನ್ನಡದ ಖ್ಯಾತ ಸಿನಿಮಾ ನಟಿಯರಾದ ಅಮೂಲ್ಯ ರಚಿತಾ ರಾಮ್ ಹಾಗೂ ರಾಧಿಕಾ ಪಂಡಿತ್ ಅವರ ಭಾವಚಿತ್ರಗಳನ್ನ ತಮ್ಮ ಜಮೀನಿನಲ್ಲಿ ನಿಲ್ಲಿಸಿದ್ದಾರೆ.

ಹೆದ್ದಾರಿ ಮೇಲೆ ಸಂಚರಿಸುವ ಜನ ಹೀಗೇಕೆ ಚಿತ್ರನಟಿಯರ ಭಾವಚಿತ್ರ ಅಂಟಿಸಿದ್ದಾರೆ ಎಂದು ಅಚ್ಚರಿಗೊಳ್ಳುತ್ತಿದ್ದಾರೆ. ಸ್ವಲ್ಪ ಹೊತ್ತು ನಿಂತು ಮುಂದೆ ಸಾಗುತ್ತಿದ್ದಾರೆ.

Advertisement

ಹುಬ್ಬಳ್ಳಿ – ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಜಮೀನು ಇರುವುದರಿಂದ ಮೇಲಿಂದಮೇಲೆ ಜನರ ದೃಷ್ಟಿ ಬೆಳೆಯ ಮೇಲೆ ಬಿಳ್ಳುತ್ತಿತ್ತು. ಈಗ ಜನರ ದೃಷ್ಟಿ ನೇರವಾಗಿ ಅಮೂಲ್ಯ, ರಾಧಿಕಾ, ರಚಿತಾ ರಾಮ್ ಅವರ ಚಿತ್ರದ ಕಡೆಗೆ ಹೋಗುತ್ತಿದ್ದು ನಮ್ಮ ಬೆಳೆಗೆ ರಕ್ಷಣೆ ಸಿಕ್ಕಂತಾಗಿದೆ. ಸದ್ಯ ಉತ್ತಮ ಲಾಭದ ಜೊತೆಗೆ ಇಳುವರಿ ಸಹ ಕೊಡುತ್ತಿದೆ ಎನ್ನುತ್ತಾರೆ ರೈತ ಮಹಾಂತೇಶ.

ರೈತರು ತಮ್ಮ ಬೆಳೆ ರಕ್ಷಣೆಗಾಗಿ ಬೇರೆ ಬೇರೆ ಪ್ರಯೋಗ ಮಾಡಿ ತಮ್ಮ ಬೆಳೆಗಳನ್ನ ರಕ್ಷಿಸಿದರೆ. ಇತ್ತ ಮಮಟಗೇರಿ ಗ್ರಾಮದ ಮಹಾಂತೇಶ ಸಿನಿಮಾ ತಾರೆಯರಿಗೆ ಮೊರೆ ಹೋಗಿದ್ದು ನಿಜಕ್ಕೂ ಅಚ್ಚರಿ ತರುವಂತಹದ್ದು.

-ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next