Advertisement

ಆರ್ಥಿಕ ಕುಸಿತಕ್ಕೆ ಕೃಷಿಕನ ತಡೆಗೋಡೆ 

11:04 AM May 07, 2020 | mahesh |

ಭಾರತ ಕೃಷಿ ಪ್ರಧಾನ ದೇಶ ಎಂದು ನಾವು ಚಿಕ್ಕ ವಯಸ್ಸಿನಿಂದಲೇ ಓದುತ್ತಾ ಬಂದಿದ್ದೇವೆ. ಖಾಸಗೀಕರಣ ಬಂದ ನಂತರ ಇಂತಹ ಮಾತು ಕೇಳುವುದು ಕಡಿಮೆಯಾಗಿತ್ತು. ಇದೀಗ ಕೋವಿಡ್ 19 ವೈರಸ್‌ನಿಂದ ಇತರೆ ಉದ್ಯಮಗಳು ಬಾಗಿಲು ಹಾಕಿಕೊಂಡಿವೆ. ಈಗ ಮತ್ತೆ ಕೃಷಿಯೇ ಬೆಳಕಾಗಬೇಕಾಗಿ ಬಂದಿದೆ.

Advertisement

ಕೋವಿಡ್ 19
ಕೃಷಿಯಿಂದ ದೇಶದ ಜಿಡಿಪಿಗೆ ಸಿಗುವ ಪಾಲು ಶೇ.16ರಷ್ಟು ಮಾತ್ರ. ಆದರೆ ದೇಶದ ಉದ್ಯೋಗಿಗಳಲ್ಲಿ ಶೇ.55ರಷ್ಟು ಕೃಷಿಯಲ್ಲೇ ಜೀವನ ಕಂಡುಕೊಂಡಿದ್ದಾರೆ. ಇದು ಕೃಷಿಕ್ಷೇತ್ರದ ಮಹತ್ವವನ್ನು ತೋರಿಸುವ ಸಂಗತಿ.

ಉತ್ತಮ ಮುಂಗಾರು ಮಳೆ ನಿರೀಕ್ಷೆ
ಭಾರತೀಯ ಹವಾಮಾನ ಇಲಾಖೆ, ಈ ಬಾರಿ ಮುಂಗಾರು ಮಳೆ ಸ ಮ ಯಕ್ಕೆ ಸರಿಯಾಗಿ ಶುರುವಾಗಿ ಉತ್ತ ಮ ವಾಗಿ ಬೀಳುವ ಸೂಚನೆ ನೀ ಡಿದೆ. ಆದರೂ ಕೋವಿಡ್ 19 ಪರಿಣಾಮ ನೀರಿಗಾಗಿ ಬೇಡಿಕೆ ಹೆಚ್ಚಿದೆ.

ದಾಖಲೆಯ ಧಾನ್ಯ ಉತ್ಪಾದನೆ ನಿರೀಕ್ಷೆ
ಈ ಬಾರಿ ಮುಂಗಾರು ಮತ್ತು ಹಿಂಗಾರು ಸೇರಿ ಭಾರತ ದಲ್ಲಿ 300 ಮಿಲಿಯನ್‌ ಟನ್‌ ಆಹಾರ ಧಾನ್ಯ ಉತ್ಪಾದನೆಯಾಗುವ ನಿರೀಕ್ಷೆಯಿದೆ. 149.92 ಮಿಲಿಯನ್‌ ಟನ್‌ (ಮುಂಗಾರು
ಬೆಳೆ), 148.4 ಮಿಲಿ ಯನ್‌ ಟನ್‌ (ಹಿಂಗಾರು ಬೆಳೆ) ಬರುವ ಲಕ್ಷಣ ಈಗಾಗಲೇ ಸಿಕ್ಕಿದೆ.

ಆರ್ಥಿಕ ಹಿಂಜರಿತಕ್ಕೆ ತಡೆ
2020-21ರಲ್ಲಿ ಕೃಷಿ ಶೇ.3ರಷ್ಟು ಉತ್ಪಾದನೆ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದ ದೇಶದ ಜಿಡಿಪಿ ಪ್ರಗತಿದರ ಶೇ.0.5ರಷ್ಟು ಏರಲಿದೆ. ಹಾಗಾಗಿ ಆರ್ಥಿಕ ಹಿಂಜರಿತಕ್ಕೆ ತಡೆಯಾಗಿ ನಿಲ್ಲಬಹುದು ಎಂಬ ಆಶಾಭಾವವಿದೆ. ರೈತರು ಆಹಾರ ಧಾನ್ಯಗಳೊಂದಿಗೆ ವಾಣಿಜ್ಯ ಬೆಳೆ ಬೆಳೆಯುವುದೂ ಇದಕ್ಕೆ ಕಾರಣ.

Advertisement

ಇತರೆ ಉದ್ಯಮಗಳ ಸ್ಥಿತಿ
27.4 ಶೇ. ಖರೀದಿ ಮತ್ತು ತಯಾರಿಕಾ (ಪಿಎಂ) ಸೂಚ್ಯಂಕದ ಪ್ರಕಾರ, ಏಪ್ರಿಲ್‌ನಲ್ಲಿ ಇತರೆ ಉದ್ಯಮಗಳ ಉತ್ಪಾದನೆ ಪ್ರಮಾಣ ಕುಸಿತ.

51.8 ಶೇ
ಪಿಎಂ ಸೂಚ್ಯಂಕದ ಪ್ರಕಾರ ಮಾರ್ಚ್‌ ತಿಂಗಳಲ್ಲಿ ಇದ್ದ ಉತ್ಪಾದನೆ ಪ್ರಮಾಣ.

80 ಶೇ.
ಸಿಐಐ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸಹಜಸ್ಥಿತಿ ಮರುಕಳಿಸಲು ಕನಿಷ್ಠ 6 ತಿಂಗಳು ಬೇಕು ಎಂದ ಸಿಇಒಗಳ ಪ್ರಮಾಣ.

Advertisement

Udayavani is now on Telegram. Click here to join our channel and stay updated with the latest news.

Next