Advertisement

ಸುಳ್ಳು ಜಾತಿ ಪತ್ರ: ಮೂವರ ವಿರುದ್ಧ ಪ್ರಕರಣ

03:36 PM Nov 12, 2021 | Team Udayavani |

ಸಾಗರ: ಇಲ್ಲಿನ ನಗರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಗಣಾಧೀಶ್ ಅವರಿಗೆ ಸುಳ್ಳು ಜಾತಿ ದೃಢೀಕರಣ ಪತ್ರ ವಿತರಿಸಿದ ಸಂಬಂಧ ಮೂವರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಈ ಹಿಂದೆ ಇಲ್ಲಿ ತಹಶೀಲ್ದಾರ್ ಆಗಿದ್ದ ಶಾಂತಿ ನಾಯ್ಕ್, ರಾಜಸ್ವ ನಿರೀಕ್ಷಕ ದಾನಪ್ಪ, ಗ್ರಾಮ ಲೆಕ್ಕಾಧಿಕಾರಿ ರೇಣುಕಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಣಾಧೀಶ್ ಅವರು ಆದಿ ಕರ್ನಾಟಕ ಜಾತಿಗೆ ಸೇರಿದವರು ಎಂದು ಜಾತಿ ದೃಢೀಕರಣ ಪತ್ರ ನೀಡಲಾಗಿತ್ತು. ಆದರೆ ಅವರು ಅರುಂಧತಿ ಜಾತಿಗೆ ಸೇರಿದವರು ಎಂದು ಬೆಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ:ಪರಿಷತ್ ಚುನಾವಣೆಯಲ್ಲಾದರೂ ಬ್ರಾಹ್ಮಣರಿಗೆ ಬಿಜೆಪಿ ಟಿಕೆಟ್ ಕೊಡಿ; ಮಸನ ಎಚ್ಚರಿಕೆ

ಬೆಂಗಳೂರಿನ ಜಾರಿ ನಿರ್ದೇಶನಾಲಯ ಈ ಬಗ್ಗೆ ತನಿಖೆ ನಡೆಸುವಂತೆ ದಾವಣಗೆರೆಯ ನಿರ್ದೇಶನಾಲಯದ ಕಚೇರಿಗೆ ಸೂಚನೆ ನೀಡಿತ್ತು. ದಾವಣಗೆರೆಯ ಕಚೇರಿಯ ಕೋರಿಕೆಯಂತೆ ಶಿವಮೊಗ್ಗ ಜಿಲ್ಲಾಧಿಕಾರಿ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ಗಣಾಧೀಶ್ ಅವರ ಜಾತಿ ಕುರಿತು ವಿಚಾರಣೆ ನಡೆಸಿ ಅವರಿಗೆ ನೀಡಿದ್ದ ಆದಿ ಕರ್ನಾಟಕ ಜಾತಿ ಧೃಢೀಕರಣ ಪತ್ರವನ್ನು ರದ್ದುಗೊಳಿಸುವಂತೆ ಸಾಗರದ ತಹಶೀಲ್ದಾರ್‌ರಿಗೆ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next