Advertisement

ಚಿಕಿತ್ಸಾ ಸಮಯದಲ್ಲಿ ಸೋಂಕಿತರಿಗೆ ಕ್ಷೌರ ಮಾಡಿ ಆತ್ಮಸ್ಥೈರ್ಯ ತುಂಬಿದ ಸುರೇಶ್ ಗೆ ಸನ್ಮಾನ

02:52 PM Jun 07, 2021 | Team Udayavani |

ಗಂಗಾವತಿ: ಕೋವಿಡ್ ಸೋಂಕಿತರಿಗೆ ಚಿಕಿತ್ಸಾ ಸಮಯದಲ್ಲೇ ನಿತ್ಯವೂ ಕ್ಷೌರ ಮಾಡುವ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಕ್ಷೌರಿಕ ಸುರೇಶ ಅವರನ್ನು ಆಸ್ಪತ್ರೆ ಮತ್ತು ಸಹಕಾರ ಮಹಾಮಂಡಳದ ವತಿಯಿಂದ ಸನ್ಮಾನಿಸಲಾಯಿತು.

Advertisement

ಈ ಸಂದರ್ಭದಲ್ಲಿ ನಿರ್ದೇಶಕ ಜಿ.ಶ್ರೀಧರ ಮಾತನಾಡಿ, ಕೋವಿಡ್ ಪ್ರತಿಯೊಬ್ಬ ಮನುಷ್ಯನಿಗೂ ತೊಂದರೆ ಕೊಟ್ಟಿದೆ. ಲಾಕ್ ಡೌನ್ ಪರಿಣಾಮ ವೃತ್ತಿಪರ ಕೆಲಸಗಾರರು ಕಳೆದ ಎರಡು ವರ್ಷಗಳಿಂದ ಬದುಕು ನಡೆಸುವುದು ದುಸ್ತರವಾಗಿದೆ. ಇಂತಹ ಕಷ್ಟದ ಮಧ್ಯೆ ಸುರೇಶ್ ನಡುವೆ ನಿತ್ಯವೂ ಕೋವಿಡ್ ಸೋಂಕಿತರಿಗೆ ಕ್ಷೌರ ಮಾಡುವ ಮೂಲಕ ಅವರು ಸ್ವಚ್ಚತೆಯಿಂದ ಕೂಡಿರಲು ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದು ಶ್ಲಾಘನೀಯವಾಗಿದೆ. ಇಂತವರನ್ನು ಗುರುತಿಸುವ ಕಾರ್ಯವಾಗಬೇಕು ಎಂದರು.

ಇದನ್ನೂ ಓದಿ:‘ಜೀವನ ಪರ್ಯಂತ ನಿನ್ನನ್ನು ಮಿಸ್ ಮಾಡ್ಕೋತಿನಿ’: ಚಿರು ನೆನೆದು ಭಾವುಕರಾದ ಅರ್ಜುನ್ ಸರ್ಜಾ

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ, ಸಹಕಾರ ಮಹಾಮಂಡಳಿಯ ವಿರೂಪಾಕ್ಷಪ್ಪ ಮುಷ್ಠಿ, ಡಾ. ಆರಾಧ್ಯ,ಡಾ.ಸೂಗಮ್ಮ, ಡಾ.ಮಂಜುನಾಥ, ಡಾ.ಕಿರಣ್, ಮಲ್ಲಿಕಾರ್ಜುನ, ಸುನಿತಾ, ಶಂಕರ್ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next