Advertisement

ಚೀನ-ಭಾರತ ಸೇನೆ ಘರ್ಷಣೆ: ಗಡಿಯಲ್ಲಿ 1,700 ಕಿ.ಮೀ. ಹೆದ್ದಾರಿ ನಿರ್ಮಾಣ

05:31 PM Dec 19, 2022 | Team Udayavani |

ಇತ್ತೀಚೆಗೆ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನ-ಭಾರತ ಸೇನೆ ಘರ್ಷಣೆ ಬೆನ್ನಲ್ಲೇ 1,700 ಕಿಮೀ ಉದ್ದದ ಗಡಿಪ್ರದೇಶದ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. 2018ರಲ್ಲೇ ಈ ರಸ್ತೆ ವಿನ್ಯಾಸವನ್ನು ಕೇಂದ್ರ ಗೃಹ ಇಲಾಖೆ ಅಂತಿಮಗೊಳಿಸಿದ್ದು, ಮುಂದಿನ 5 ವರ್ಷಗಳಲ್ಲಿ ಗಡಿನಾಡ ಹೆದ್ದಾರಿ ನಿರ್ಮಾಣ ಪೂರ್ಣಗೊಳ್ಳಲಿದೆ.

Advertisement

ಉದ್ದೇಶವೇನು?
– ಅರುಣಾಚಲ ಪ್ರದೇಶದಲ್ಲಿ ಚೀನಾಕ್ಕೆ ಹೊಂದಿಕೊಂಡಂತೆ ಇರುವ ಟಿಬೆಟ್‌, ಚೀನ, ಮ್ಯಾನ್ಮಾರ್‌ ಗಡಿ ಪ್ರದೇಶಕ್ಕೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣ.
– ಗಡಿ ಪ್ರದೇಶದ ಮೂಲಕ ಜನರು ವಲಸೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕಾಮಗಾರಿ.
– ಗಡಿ ಪ್ರದೇಶಕ್ಕೆ ಸುಲಭವಾಗಿ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಸರಕುಗಳನ್ನು ಹಾಗೂ ಸೇನಾ ಸಿಬ್ಬಂದಿಯನ್ನು ಸಾಗಿಸಲು.
– ಚೀನ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಕೇಂದ್ರದಿಂದಲೂ ಈ ಕೆಲಸ

ಎಲ್ಲಿಂದ ಶುರು?- ಬೊಮಿಡಿಲಾ
ಮುಕ್ತಾಯ ಎಲ್ಲಿ? – ಭಾರತ-ಮ್ಯಾನ್ಮಾರ್‌ ಗಡಿ ಪ್ರದೇಶವಾದ ವಿಜಯನಗರ

ರಸ್ತೆ ಎಲ್ಲಿ ಹಾದು ಹೋಗಲಿದೆ?
ಸರ್ಲಿ-ಹುರಿ- ಮುನಿಗಾಂಗ್‌- ಜಿಡೋ-ಹುನ್ಲಿ- ಹಯುಲಿಯಾಂಗ್‌-ಹವಾಯಿ-ಖಸಾರ್ಸಂಗ್‌-ರಾಮನಗರ

ನಿರ್ಮಾಣ ಯಾರಿಂದ?
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಸಚಿವಾಲಯ

Advertisement

27 ಸಾವಿರ ಕೋಟಿ ರೂ.- ಯೋಜನೆ ವೆಚ್ಚ
1, 748 ಕಿಮೀ- ರಸ್ತೆಯ ಉದ್ದ
2 ಲೇನ್‌- ಪ್ರಸ್ತಾವಿತ ರಸ್ತೆಯ ಅಗಲ
2024-25ರ- ಒಳಗಾಗಿ ಎಲ್ಲಾ 9 ಪ್ಯಾಕೇಜ್‌ಗಳಿಗೆ ಮಂಜೂರು.
2027- ಕಾಮಗಾರಿ ಮುಕ್ತಾಯದ ಗುರಿಯ ವರ್ಷ

ಸದ್ಯದ ಸ್ಥಿತಿ ಏನು?- ಕಳೆದ ತಿಂಗಳು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ. 192 ಕಿಮೀ ದೂರದ ಕಾಮಗಾರಿ ಶುರು.

 

 

Advertisement

Udayavani is now on Telegram. Click here to join our channel and stay updated with the latest news.

Next