Advertisement

ಏರಿಂಡಿಯಾ ಬಗ್ಗೆ ತೀವ್ರ ಅಸಮಾಧಾನ

10:31 PM Apr 02, 2019 | Lakshmi GovindaRaju |

ನವದೆಹಲಿ: ಚುನಾವಣಾ ಆಯೋಗದ ಷೋಕಾಸ್‌ ನೋಟಿಸ್‌ಗೆ ಸ್ಪಂದಿಸದ ಏರ್‌ಇಂಡಿಯಾ ವಿರುದ್ಧ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿಯವರ ಫೋಟೋವುಳ್ಳ ಬೋರ್ಡಿಂಗ್‌ ಪಾಸ್‌ ಅನ್ನು ಏರಿಂಡಿಯಾ ಬಳಕೆ ಮಾಡಿದ್ದನ್ನು ಪ್ರಶ್ನಿಸಿ ಆಯೋಗವು ನೋಟಿಸ್‌ ಜಾರಿ ಮಾಡಿತ್ತು.

Advertisement

ಅಲ್ಲದೆ ಈ ಬಗ್ಗೆ ಉತ್ತರಿಸಲು ಗಡುವನ್ನೂ ನೀಡಿತ್ತು. ಆದರೆ, ಗಡುವು ಮುಗಿದು 2 ದಿನಗಳಾದರೂ ಏರಿಂಡಿಯಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಸ್ಥೆಗೆ ಖಡಕ್ಕಾಗಿ ಪತ್ರ ಬರೆದಿರುವ ಆಯೋಗ,

“ನಮ್ಮ ಕಾನೂನುಬದ್ಧ ಸೂಚನೆಯನ್ನು ಪಾಲಿಸದೇ ಇರುವ ನಿಮ್ಮ ವರ್ತನೆಯಿಂದ ಅಸಮಾಧಾನವಾಗಿದೆ. ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿ ನಮ್ಮ ಮುಂದೆ ಹಾಜರಾಗಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next