Advertisement

Ooty ತೀವ್ರ ಚಳಿ: ಶೂನ್ಯದತ್ತ ಕನಿಷ್ಠ ತಾಪಮಾನ

01:10 AM Jan 19, 2024 | Team Udayavani |

ನೀಲಗಿರಿ: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ತೀವ್ರ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಚಳಿಯು ಕೃಷಿ ಮೇಲೆ ಕೂಡ ಪರಿಣಾಮ ಬೀರಿದೆ.

Advertisement

ಹಚ್ಚ ಹಸಿರಿನ ಹುಲ್ಲುಹಾಸು ಹಿಮದಿಂದ ಆವೃತವಾಗಿವೆ ಮತ್ತು ದಟ್ಟ ಮಂಜು ಗೋಚರತೆಯ ಮೇಲೆ ಪರಿಣಾಮ ಬೀರಿದೆ. ತೀವ್ರ ಚಳಿಯು ಸ್ಥಳೀಯರಲ್ಲಿ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತಿದೆ.

ಊಟಿಯಲ್ಲಿ ಬುಧವಾರ 2 ಡಿ.ಸೆ. ತಾಪಮಾನ ದಾಖಲಾಗಿದೆ. ಅದೇ ರೀತಿ ಕಾಂತಾಲ್‌ ಮತ್ತು ತಲೈಕುಂಠದಲ್ಲಿ 1 ಡಿ.ಸೆ. ಹಾಗೂ ಸ್ಯಾಂಡಿನಲ್ಲಾದಲ್ಲಿ 3 ಡಿ.ಸೆ. ದಾಖಲಾಗಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಅಲ್ಲಲ್ಲಿ ಬೆಂಕಿ ಹಚ್ಚಿ, ಚಳಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

“ಇದು ಅಕಾಲಿಕವಾದ ಚಳಿಯಾಗಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಎಲ್‌-ನಿನೊ ಪರಿಣಾಮದಿಂದ ಈ ಬದಲಾವಣೆಯಾಗಿದೆ. ಚಹಾ ತೋಟ, ತರಕಾರಿಗಳು ಮುಖ್ಯವಾಗಿ ಎಲೆಕೋಸು ಬೆಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿದೆ. ಅಲ್ಲದೇ ಸ್ಥಳೀಯರಲ್ಲಿ ಜ್ವರ, ತೀವ್ರ ತಲೆನೋವು ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದು ನೀಲಗಿರಿ ಪರಿಸರ ಸಾಮಾಜಿಕ ಟ್ರಸ್ಟ್‌ನ ವಿ.ಶಿವದಾಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next