Advertisement

ಆರೋಗ್ಯ ವಿಮೆ ಇಲ್ಲದ ವರ್ಗಕ್ಕೆ “ಆಯುಷ್ಮಾನ್‌’ವಿಸ್ತರಣೆ?

07:57 PM Jan 18, 2023 | Team Udayavani |

ನವದೆಹಲಿ:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಫೆ.1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಸಾಧ್ಯತೆಗಳು ಇವೆ. ಅದಕ್ಕೆ ಪೂರಕವೆಂಬಂತೆ, 2018ರ ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಜಾರಿಯಾಗಿರುವ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿಪಿಎಂ-ಜೆಎವೈ)ಯನ್ನು ಬಡವರಲ್ಲದ ವ್ಯಾಪ್ತಿಯ ವರ್ಗದವರಿಗೆ ಕೂಡ ವಿಸ್ತರಿಸುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳು ಇವೆ.

Advertisement

ಸದ್ಯ ಈ ಯೋಜನೆ ದೇಶದ ಶೇ.60ರಷ್ಟು ಮಂದಿ ಅರ್ಹ ಫ‌ಲಾನುಭವಿಗಳನ್ನು ಹೊಂದಿದೆ. ಒಟ್ಟು ಜನಸಂಖ್ಯೆಯ ಪೈಕಿ 40 ಕೋಟಿ ಅಥವಾ ಶೇ.30 ಮಂದಿಗೆ ಯಾವುದೇ ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ವಿಮೆಗಳನ್ನು ಹೊಂದಿಲ್ಲ.

ನೀತಿ ಆಯೋಗ ಈ ವರ್ಗವನ್ನು “ಅನುಕೂಲ ವಂಚಿತ’ ಎಂದು ಹೆಸರಿಸಿದೆ. ಈ ವರ್ಗಕ್ಕೂ ಆಯುಷ್ಮಾನ್‌ ಯೋಜನೆಯನ್ನು ವಿಸ್ತರಿಸುವ ಮತ್ತು ಪ್ರಸ್ತಾವಿತ ಯೋಜನೆಯಲ್ಲಿ ವ್ಯಕ್ತಿ ಕೇಂದ್ರಿತ ಆರೋಗ್ಯ ವಿಮೆ ಜಾರಿ ಮಾಡುವ ಚಿಂತನೆಯಿದೆ ಎಂದು “ಲೈವ್‌ ಮಿಂಟ್‌’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next