Advertisement

ದನದ ಮಾಂಸ ಕತ್ತರಿಸುತ್ತಾ ಇರಿ: ಓವೈಸಿ ಹೇಳಿಕೆಗೆ ನಿರ್ಮಲಾ ಆಕ್ರೋಶ

01:42 AM Apr 21, 2024 | Team Udayavani |

ಹೈದರಾಬಾದ್‌: ಚುನಾವಣೆ ಪ್ರಚಾರದ ವೇಳೆ ಎಂಐಎಂ ನಾಯಕ ಅಸಾದುದ್ದೀನ್‌ ಒವೈಸಿ ನೀಡಿ ರುವ “ಮಾಂಸ ಕತ್ತರಿಸುತ್ತಲೇ ಇರಿ’ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಈ ಬಗ್ಗೆ ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್‌ ಆಕ್ಷೇಪಿಸಿ ಅಸಭ್ಯ ಹೇಳಿಕೆ ನೀಡುವುದರಲ್ಲಿ ಓವೈಸಿ ನಿಸ್ಸೀಮರು ಎಂದಿದ್ದಾರೆ.

Advertisement

ಹೈದರಾಬಾದ್‌ನಲ್ಲಿ ಚುನಾವಣೆ ಪ್ರಚಾರದ ವೇಳೆ ದನದ ಮಾಂಸದ ಅಂಗಡಿಗೆ ಭೇಟಿ ನೀಡಿದ ಓವೈಸಿ ಅಂಗಡಿಯ ಮಾಲಕರೊಂದಿಗೆ ಮಾತನಾ ಡಿದ್ದಾರೆ. ಈ ವೇಳೆ ಅಂಗಡಿಯ ಹೆಸರು ಉಲ್ಲೇಖೀಸಿ ಜಿಂದಾಬಾದ್‌ ಹೇಳಿ, ಹೀಗೆ ಮಾಂಸ ಕತ್ತರಿಸುತ್ತಲೇ ಇರಿ ಎಂದು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಪ್ರತಿಕ್ರಿಯಿಸಿ ಅಸಾದುದ್ದೀನ್‌ ಹಾಗೂ ಅವರ ಸಹೋದರ ಅಕºರುದ್ದೀನ್‌ ಇಬ್ಬರೂ ಅಸಭ್ಯ ಹೇಳಿಕೆ ನೀಡುವಲ್ಲಿ ನಿಸ್ಸೀಮರು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next