Advertisement

ವಿಶ್ವೇಶ್ವರಯ್ಯ ವಿವಿಯಿಂದ ವಿದ್ಯಾರ್ಥಿಗಳ ಶೋಷಣೆ

02:49 PM Sep 02, 2017 | Team Udayavani |

ಚಿತ್ರದುರ್ಗ: ಇಂಜಿನಿಯರಿಂಗ್‌ ಕಾಲೇಜುಗಳ 2010ರ ಸ್ಕೀಮ್‌ (ನಾನ್‌-ಸಿಬಿಸಿಎಸ್‌) ವಿದ್ಯಾರ್ಥಿಗಳಿಗೆ ಕ್ರಿಟಿಕಲ್‌ ಇಯರ್‌ ಬ್ಯಾಕ್‌ ಹಾಗೂ ಇಯರ್‌ ಬ್ಯಾಕ್‌ ವ್ಯವಸ್ಥೆ ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಡಿಎಸ್‌ಒ ಹಾಗೂ ವಿಟಿಯು ವಿದ್ಯಾರ್ಥಿಗಳ
ಹೋರಾಟ ಸಮಿತಿ ನೇತೃತ್ವದಲ್ಲಿ ವಿಟಿಯು ವ್ಯಾಪ್ತಿಯ ಜೆಎಂಐಟಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಕಾಲೇಜು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

Advertisement

ನೂರಾರು ಸಂಖ್ಯೆಯಲ್ಲಿ ಕಾಲೇಜಿನ ಮುಖ್ಯದ್ವಾರದ ಬಳಿ ಸೇರಿದ ವಿದ್ಯಾರ್ಥಿಗಳು ವಿಟಿಯು ವಿರುದ್ಧ  ಧಿಕ್ಕಾರ ಕೂಗಿದರು. ಸಿಬಿಸಿಎಸ್‌ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯಿಸಿದರಲ್ಲದೆ ಶೋಷಣೆ ತಪ್ಪಿಸುವಂತೆ ಆಗ್ರಹಿಸಿದರು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪ್ರದೀಪ್‌ ಮಾತನಾಡಿ, ಡಿಸೆಂಬರ್‌ 2016ರಲ್ಲಿ ನಡೆದ ಇಂಜಿನಿಯರಿಂಗ್‌ ಪರೀಕ್ಷೆಗಳ ಫಲಿತಾಂಶವನ್ನು ವಿಟಿಯು ಸುಮಾರು 5 ತಿಂಗಳು ವಿಳಂಬವಾಗಿ ಪ್ರಕಟಿಸಿದೆ.  ಇದರಿಂದಾಗಿ ವಿದ್ಯಾರ್ಥಿಗಳು ಹಲವು ತೊಂದರೆ ಎದುರಿಸುತ್ತಿದ್ದಾರೆ. 2015-16ರಿಂದ ವಿಟಿಯು ನೂತನ ಸಿಬಿಸಿಎಸ್‌ ಪದ್ಧತಿಯನ್ನು ಜಾರಿಗೊಳಿಸಿತು. ಇದರಿಂದಾಗಿ ಏಕಕಾಲಕ್ಕೆ ಎರಡು ಬ್ಯಾಚ್‌ ವಿದ್ಯಾರ್ಥಿಗಳು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕಲಿಯುತ್ತಿದ್ದರು. ಸಿಬಿಸಿಎಸ್‌ ಬ್ಯಾಚ್‌ ಒಂದೆಡೆಯಾದರೆ, ಮತ್ತೂಂದೆಡೆ ನಾನ್‌ ಸಿಬಿಸಿಎಸ್‌ ಬ್ಯಾಚ್‌, ನಾನ್‌ ಸಿಬಿಸಿಎಸ್‌ ಬ್ಯಾಚ್‌ ವಿದ್ಯಾರ್ಥಿಗಳಿಗೆ ಇಯರ್‌ ಬ್ಯಾಕ್‌ ಹಾಗೂ ಕ್ರಿಟಿಕಲ್‌ ಇಯರ್‌ ಬ್ಯಾಕ್‌ ಪದ್ಧತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿದರು.

ಯಾವುದೇ ಹೊಸ ಪದ್ಧತಿಯನ್ನು ಜಾರಿಗೊಳಿಸುವಾಗ ಹಳೆ ಬ್ಯಾಚ್‌ ವಿದ್ಯಾರ್ಥಿಗಳಿಗೆ ಪೂರ್ತಿ ಕ್ಯಾರಿ ಓವರ್‌ ನೀಡಿ ಅವರು ಕೋರ್ಸ್‌ ಮುಗಿಸಿಕೊಂಡು ಹೋಗುವಂತಹ ಪ್ರಜಾತಾಂತ್ರಿಕ ವ್ಯವಸ್ಥೆ ಮಾಡಬೇಕು. ಆದರೆ ವಿಟಿಯು ಈ ರೀತಿಯ ವ್ಯವಸ್ಥೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಿಬಿಸಿಎಸ್‌ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ವಿಟಿಯು ಅತ್ಯಂತ ತಡವಾಗಿ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಹಲವು ಸಮಸ್ಯೆಗಳನ್ನು ತಂದಿಟ್ಟಿದೆ. ಇದರ ಜೊತೆಗೆ 2014-15ರಲ್ಲಿ ಜಾರಿಯಾದ ನೂತನ ಸಿಬಿಸಿಎಸ್‌ ಪದ್ಧತಿಯ ಅಂಕಪಟ್ಟಿಯಲ್ಲಿ ಎಲ್ಲ ವಿಷಯಗಳ ಫಲಿತಾಂಶವನ್ನು ಗ್ರೇಡ್‌ ಮೂಲಕ ನೀಡಲಾಗುತ್ತಿದೆ. ಯಾವುದೇ ವಿಷಯದಲ್ಲಿ ಅನುತ್ತೀರ್ಣರಾದರೆ ಅಂಕಪಟ್ಟಿಯಲ್ಲಿ ಸೊನ್ನೆ ಎಂದು ನಮೂದಿಸಲಾಗುತ್ತಿದೆ. ವಿದ್ಯಾರ್ಥಿಗಳು
ಎಷ್ಟೇ ಅಂಕ ಪಡೆದರೂ ಅನುತ್ತೀರ್ಣವಾದ ವಿಷಯದ ಅಂಕಗಳನ್ನು ಸೊನ್ನೆಯೆಂದು ನಮೂದಿಸುವುದರ ಫಲವಾಗಿ ವಿದ್ಯಾರ್ಥಿಗಳಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕೋ ಬೇಡವೋ ಎಂಬ ಗೊಂದಲ ಉಂಟಾಗುತ್ತಿದೆ ಎಂದು ದೂರಿದರು.

ಪ್ರಾಂಶುಪಾಲ ರಾಜಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳಾದ ಶ್ರೀಧರ ಕಾಳೆ, ಸಂತೋಷ್‌, ಸಂಜನಾ, ಸುಪ್ರಿಯಾ, ರೇಖಾ, ಪ್ರಭು, ಕಿರಣ್‌, ನಾಗರಾಜ, ಪ್ರಣವ್‌, ಜ್ಞಾನೇಶ್‌, ದಿವಾಕರ್‌, ಎಐಡಿಎಸ್‌ನ ಪ್ರದೀಪ್‌, ಚೇತನ್‌, ವಿಜಯ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಸಿಬಿಸಿಎಸ್‌ ಪಠ್ಯಕ್ರಮ ಅತ್ಯಂತ ಸುದೀರ್ಘ‌ವಾಗಿದೆ. ಒಂದು ಸೆಮಿಸ್ಟರ್‌ನಲ್ಲಿ ಪಠ್ಯಕ್ರಮ ಮುಗಿಸಲಾಗದೇ ಪ್ರಾಧ್ಯಾಪಕರು ಒದ್ದಾಡುತ್ತಿದ್ದಾರೆ. ಇದು ಫಲಿತಾಂಶ ಕಡಿಮೆಯಾಗಲು ಕಾರಣ. ಅಲ್ಲದೇ ಅಟಾನಮಸ್‌ (ಸ್ವಾಯತ್ತ) ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ನಡೆಸುತ್ತಿವೆ. ಆದರೆ ವಿಟಿಯು ವ್ಯಾಪಿಯ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಈ ಸೌಲಭ್ಯವಿಲ್ಲ.
 ರವಿಕುಮಾರ್‌, ಎಐಡಿವೈಒ ಜಿಲ್ಲಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next