Advertisement

ಮೂರು ವರ್ಷದಲ್ಲಿ ಪ್ರಯೋಗ ಮಾತ್ರ

07:50 AM Sep 05, 2017 | Team Udayavani |

ಮುಂಬೈ/ಪಾಟ್ನಾ: ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಶಿವಸೇನೆ ಅತೃಪ್ತಿ ಮುಂದುವರಿಸಿದೆ. ಕೇಂದ್ರ ಸರ್ಕಾರ ಮೂರು ವರ್ಷಗಳಿಂದ ಪ್ರಯೋಗಗಳನ್ನೇ ನಡೆಸುತ್ತಿದೆ ಎಂದು ಪಕ್ಷ ಟೀಕಿಸಿದೆ. ಇದೇ ವೇಳೆ, ಕೇಂದ್ರ ಸಂಪುಟ ಸೇರುವ ಇರಾದೆಯೇ ಜೆಡಿಯುಗೆ ಇರಲಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ. 

Advertisement

ಹಾಲಿ ಕೇಂದ್ರ ಸರ್ಕಾರ ಮೂರು ವರ್ಷಗಳಿಂದ ಪ್ರಯೋಗಗಳನ್ನೇ ನಡೆಸುತ್ತಿದೆ ಎಂದು ಶಿವಸೇನೆ ಟೀಕಿಸಿದೆ. ಪಕ್ಷದ ಮುಖವಾಣಿ “ಸಾಮ್ನಾ’ ಸಂಪಾದಕೀಯದಲ್ಲಿ ಈ ಬಗ್ಗೆ ಟೀಕಿಸಲಾಗಿದೆ. ದೇಶವಾಸಿಗಳು ಉತ್ತಮ ದಿನಕ್ಕಾಗಿ ಕಾಯುತ್ತಲೇ ಇದ್ದಾರೆ. ನೂತನ ಸಚಿವರ ಸೇರ್ಪಡೆ ಮತ್ತು ಅವರಿಗೆ ಖಾತೆ ಹಂಚಿಕೆ ಬಿಜೆಪಿಯ ಆಂತರಿಕ ವಿಚಾರ. ದೇಶದ ಭದ್ರತೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ. ಹಾಲಿ ಸಂಪುಟ ವಿಸ್ತರಣೆಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರೇ ಆಯ್ಕೆ ಮಾಡಿದವರು ಮಾತ್ರ ಪ್ರಮಾಣ ಸ್ವೀಕರಿಸಿದ್ದಾರೆ ಎಂದಿದೆ.

ವೈಫ‌ಲ್ಯ: ಪ್ರಧಾನಿ ಮೋದಿ ಘೋಷಣೆ ಮಾಡಿದ ನೋಟುಗಳ ಅಪನಗದೀಕರಣ ಪೂರ್ಣವಾಗಿ ವಿಫ‌ಲ ಹೊಂದಿದೆ. ಹಣದುಬ್ಬರ, ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ವಯೋಮಿತಿಯ ಕಾರಣದಿಂದ ಕೆಲವರನ್ನು ಸಂಪುಟದಿಂದ ಕೈಬಿಡಲಾಗಿದೆ. ಹಾಗಿದ್ದರೆ, ಪ್ರಧಾನಿ ಮತ್ತು ಬಿಜೆಪಿ ಅಧ್ಯಕ್ಷರೇ ಆಯ್ಕೆ ಮಾಡಿದವರ ಸಾಧನೆ ತೃಪ್ತಿಕರವಾಗಿದೆಯೇ ಎಂದು ಪಕ್ಷ ಪ್ರಶ್ನಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next