Advertisement

ನಗರದಲ್ಲಿ ಭೂ ಕಂಪನ ಅನುಭವ

11:22 AM Aug 17, 2018 | |

ಬೆಂಗಳೂರು: ನಗರದ ಕೆಲವೆಡೆ ಗುರುವಾರ ಮಧ್ಯಾಹ್ನ ಭೂ ಕಂಪಿಸಿದ ಅನುಭವ ಉಂಟಾಗಿ ಕೆಲಕಾಲ ಸಾರ್ವಜನಿಕರು ಆತಂಕಗೊಂಡ ಘಟನೆ ನಡೆಯಿತು.

Advertisement

ಮಧ್ಯಾಹ್ನ 2.30 ರ ಸುಮಾರಿಗೆ ರಾಜರಾಜೇಶ್ವರಿ ನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಕತ್ರಿಗುಪ್ಪೆ, ಗೌಡನಪಾಳ್ಯ, ವಿಜಯನಗರ ಮತ್ತಿತರ ಭಾಗಗಳಲ್ಲಿ ಭಾರೀ ಸದ್ದಿನೊಂದಿಗೆ ಕಂಪನದ ಅನುಭವ ಉಂಟಾಗಿ ಮನೆಯಲ್ಲಿದ್ದ ಪಾತ್ರೆಗಳು ಉರುಳಿಬಿದ್ದು ಮನೆಯ ಕಿಟಕಿ ಗಾಜು ಅಲುಗಾಡಿದ ಅನುಭವ ಉಂಟಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಬಂದು ಆತಂಕಗೊಂಡರು. ಈ ಕುರಿತು ಪ್ರತಿಕ್ರಿಯಿಸಿದ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು, ಭೂ ಕಂಪನದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ರಿಕ್ಟರ್‌ ಮಾಪಕದಲ್ಲೂ ಆ ಬಗ್ಗೆ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next